ಕರ್ನಾಟಕ

karnataka

By

Published : Aug 8, 2022, 3:37 PM IST

ETV Bharat / videos

ಕಾಮನ್​ವೆಲ್ತ್​​​ ಸಾಧಕ ಗುರುರಾಜ್ ಪೂಜಾರಿ ಬೈಂದೂರಿಗೆ ಆಗಮನ; ಅದ್ಧೂರಿ ಸ್ವಾಗತ, ಸನ್ಮಾನ

ಉಡುಪಿ: ಕಾಮನ್​ವೆಲ್ತ್ ಗೇಮ್ಸ್ 2022 ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಗುರುರಾಜ್ ಪೂಜಾರಿ ತಮ್ಮ ಹುಟ್ಟೂರಾದ ಬೈಂದೂರಿಗೆ ಆಗಮಿಸಿದರು. ಈ ಸಂದರ್ಭದಲ್ಲಿ ಜನರು ಅದ್ಧೂರಿ ಸ್ವಾಗತ ಕೋರಿದ್ದು, ಸನ್ಮಾನ ಕಾರ್ಯಕ್ರಮವೂ ನಡೆಯಿತು. ಅಜ್ಜರಕಾಡು ಕ್ರೀಡಾಂಗಣದಲ್ಲಿ ಗುರುರಾಜ್​ಗೆ ಜಿಲ್ಲಾಡಳಿತ ವತಿಯಿಂದ ಜಿಲ್ಲಾಧಿಕಾರಿ ಕೂರ್ಮರಾವ್ ಸನ್ಮಾನ ಮಾಡಿದರು. ತಂದೆ ಮಹಾಬಲ ಪೂಜಾರಿ, ಪತ್ನಿ ಸೌಜನ್ಯ ಇದ್ದರು.

ABOUT THE AUTHOR

...view details