ರೈತ ಇಷ್ಟಪಟ್ಟು ಕಬ್ಬು ಬೆಳೆದಿದ್ದ. ಇನ್ನೇನು ಅದನ್ನ ಕಟಾವು ಮಾಡಿಸಿ ಕೈ ತುಂಬಾ ರೊಕ್ಕ ನೋಡಬಹುದು ಅಂತಾ ನಿರೀಕ್ಷೆ ಕಂಗಳಿಂದ ಕಾಯುತ್ತಿದ್ದ. ಆದರೆ, ಒಂದೆಡೆ ಕಾರ್ಖಾನೆ ನಿರ್ಲಕ್ಷ್ಯ ಮತ್ತೊಂದೆಡೆ ಕೂಲಿಯಾಳುಗಳ ಅಲಭ್ಯತೆ. ಇವು ರೈತನನ್ನ ಅಸಹಾಯಕ ಪರಿಸ್ಥಿತಿಗೆ ತಳ್ಳಿದವು. ಪರಿಣಾಮ ತೀವ್ರವಾಗಿ ಮನನೊಂದ ರೈತ ತಾನೇ ಬೆಳೆದಿದ್ದ ಕಬ್ಬಿಗೆ ತಾನೇ ಕೊಳ್ಳಿ ಇಟ್ಟಿದ್ದಾನೆ..