ಕರ್ನಾಟಕ

karnataka

By

Published : Mar 6, 2021, 12:40 PM IST

ETV Bharat / videos

ಕುಕನೂರು: ಅದ್ಧೂರಿಯಾಗಿ ನೆರವೇರಿದ ಸರ್ವಾಧ್ಯಕ್ಷರ ಮೆರವಣಿಗೆ

ಕೊಪ್ಪಳ: ಜಿಲ್ಲೆಯ ಕುಕನೂರು ತಾಲೂಕಿನ ಬೆಣಕಲ್ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ಇಂದು ಸಂಭ್ರಮದಿಂದ ನೆರವೇರಿತು. ಸಮ್ಮೇಳನದ ಸರ್ವಾಧ್ಯಕ್ಷ ಹಿರಿಯ ಸಾಹಿತಿ ಡಾ. ಫಕೀರಪ್ಪ ವಜ್ರಬಂಡಿ ಅವರನ್ನು ಅಲಂಕೃತ ವಾಹನದಲ್ಲಿ ಬೆಣಕಲ್​ ಗ್ರಾಮದ ಶ್ರೀ ಅನ್ನದಾನೀಶ್ವರ ಮಠದಿಂದ ಸಮ್ಮೇಳನದ ಮುಖ್ಯವೇದಿಕೆಗೆ ಕರೆ ತರಲಾಯಿತು. ಕುಂಭಹೊತ್ತ ಮಹಿಳೆಯರು, ನಂದಿಧ್ವಜ, ಮಹಿಳಾ ವೀರಗಾಸೆ ತಂಡ, ದೊಳ್ಳು ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿದವು.

ABOUT THE AUTHOR

...view details