ಕರ್ನಾಟಕ

karnataka

By

Published : Dec 11, 2020, 12:23 PM IST

ETV Bharat / videos

ಬೆಳಗಾವಿ: ಬಸ್ ಸಿಗದೆ ಪರೀಕ್ಷೆಗೆ ತೆರಳಬೇಕಿದ್ದ ವಿದ್ಯಾರ್ಥಿನಿಯರ ಪರದಾಟ

ಬೆಳಗಾವಿ: ಬಸ್ ಸಂಚಾರ ಸ್ಥಗಿತಗೊಳಿಸಿ ನಡೆಯುತ್ತಿರುವ ಸಾರಿಗೆ ನೌಕರರ ಹೋರಾಟದ ಹಿನ್ನೆಲೆಯಲ್ಲಿ ನಗರ ಕೇಂದ್ರ ಬಸ್ ನಿಲ್ದಾಣದಲ್ಲಿ ಕಾಲೇಜು ವಿದ್ಯಾರ್ಥಿನಿಯರು ಪರದಾಟ ಅನುಭವಿಸಿದರು. ಈ ವೇಳೆ ಕೆಲ ವಿದ್ಯಾರ್ಥಿನಿಯರು ಮಾತನಾಡಿ, ನಮ್ಮ ಕಾಲೇಜಿನಲ್ಲಿ ಇಂದು ಪೂರಕ ಪರೀಕ್ಷೆ ಇತ್ತು. ಜನವರಿಯಲ್ಲಿ ತ್ರೈಮಾಸಿಕ ಪರೀಕ್ಷೆಯೂ ಇದೆ. ಕೋವಿಡ್ ಕಾರಣ ಎಂಟು ತಿಂಗಳು ಕಾಲೇಜು ಬಂದ್ ಇದ್ದು, ಕಳೆದ ಕೆಲ ದಿನಗಳ ಹಿಂದಷ್ಟೇ ಕಾಲೇಜುಗಳು ಆರಂಭವಾಗಿದೆ. ಇಂದು ಪ್ರತಿಭಟನೆ ನಡೆಯುತ್ತಿದ್ದು, ಆಟೋಗಳಲ್ಲಿ ಹೋಗಬೇಕಂದ್ರೆ 150 ರಿಂದ 200 ರೂ. ಕೇಳುತ್ತಾರೆ. ಹೀಗಾಗಿ ಸಾರಿಗೆ‌ ನೌಕರರ ಸಮಸ್ಯೆಗಳನ್ನು ಆಲಿಸಿ ಅವರ ಸಮಸ್ಯೆಯನ್ನು ಸರ್ಕಾರ ಬಗೆಹರಿಸಬೇಕು. ಬಸ್ ಸಂಚಾರ ಆರಂಭಿಸಿ ನಮಗೆ ಅನುಕೂಲ ಮಾಡಿಕೊಡಿ ಎಂದು ಮನವಿ ಮಾಡಿಕೊಂಡರು.

ABOUT THE AUTHOR

...view details