ಕರ್ನಾಟಕ

karnataka

By

Published : Apr 22, 2020, 2:19 PM IST

ETV Bharat / videos

ಜನರಲ್ಲಿ ಕೊರೊನಾ ಜಾಗೃತಿ ಮೂಡಿಸಲು ಸೈಕಲ್​ ಏರಿದ ಸಂಸದ ಹಾಗೂ ಶಾಸಕ

ಕೊಪ್ಪಳ: ಕೊರೊನಾ ಜಾಗೃತಿಗಾಗಿ ನಗರದಲ್ಲಿ ಇಂದು ಸೈಕಲ್ ಜಾಥಾ ನಡೆಯಿತು. ಈ ಜಾಗೃತಿ ಜಾಥಾದಲ್ಲಿ ಸಂಸದ ಸಂಗಣ್ಣ ಕರಡಿ ಹಾಗೂ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಸೈಕಲ್ ಏರಿ ಜಾಗೃತಿ ಮೂಡಿಸಿದರು. ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಈ ಸೈಕಲ್ ಜಾಥಾ ನಗರದ ಅಶೋಕ ವೃತ್ತದಿಂದ ಆರಂಭವಾಗಿ, ಜವಾಹರ ರಸ್ತೆ ಮೂಲಕ ದಿವಟರ್ ಸರ್ಕಲ್, ಗಡಿಯಾರ ಕಂಬ ಸರ್ಕಲ್, ಅಂಬೇಡ್ಕರ್ ಸರ್ಕಲ್, ಗಾಂಧಿ ಸರ್ಕಲ್, ಹಳೆ ಜಿಲ್ಲಾಧಿಕಾರಿ ಕಚೇರಿ ಮೂಲಕ ಸಾಗಿತು. ಸುಮಾರು 6 ಕಿಲೋ ಮೀಟರ್ ವರೆಗೆ ಸೈಕಲ್ ಜಾಥಾ ನಡೆಯಿತು.

ABOUT THE AUTHOR

...view details