ಚುನಾವಣೆ ಬಂದಾಗ ಕಣ್ಣೀರು ಹಾಕುವುದು ಕುಮಾರಸ್ವಾಮಿ ಕುಟುಂಬದ ಸ್ಟೈಲ್: ಶಾಸಕ ಯತ್ನಾಳ್
ಹಾವೇರಿ: ಚುನಾವಣೆ ಬಂದಾಗ ಅಳುವುದು ಕುಮಾರಸ್ವಾಮಿ ಕುಟುಂಬದ ಸ್ಟೈಲ್. ಅವರ ಜೇಬಲ್ಲಿ ಯಾವಾಗಲೂ ವಿಕ್ಸ್, ಅಮೃತಾಂಜನ್ ಇಟ್ಕೊಂಡಿರ್ತಾರೆ ಎಂದು ಹಾವೇರಿಯ ರಟ್ಟಿಹಳ್ಳಿಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವ್ಯಂಗ್ಯವಾಡಿದ್ದಾರೆ. ಡಿಸೆಂಬರ್ 9ರ ನಂತರ ಸರ್ಕಾರ ಉರುಳುತ್ತೆ ಅನ್ನೋ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಹೇಳಿದ್ದೆಲ್ಲ ಉಲ್ಟಾ ಆಗುತ್ತೆ. ಅವರು ಹೀಗೇ ಭವಿಷ್ಯ ಹೇಳುತ್ತಿರಲಿ, ಅವರಿಗೆ ಧನ್ಯವಾದಗಳು ಎಂದಿದ್ದಾರೆ.