ಕರ್ನಾಟಕ

karnataka

ಡ್ರಗ್ಸ್​ ಸಿಗದೆ ಸ್ಯಾನಿಟೈಸರ್​ ಮೊರೆ ಹೋದ್ರಾ ವ್ಯಸನಿಗಳು?

By

Published : Apr 16, 2020, 12:35 PM IST

Published : Apr 16, 2020, 12:35 PM IST

ಹುಬ್ಬಳ್ಳಿ: ಲಾಕ್​ಡೌನ್ ಹಿನ್ನೆಲೆ ಮಾದಕ ವಸ್ತುಗಳು ಸಿಗದ ಕಾರಣ ಯುವಕರು ಅಡ್ಡದಾರಿ ಹಿಡಿದಿದ್ದಾರೆ. ನಶೆಗಾಗಿ ಸ್ಯಾನಿಟೈಸರ್​ಗಳನ್ನು ಬಳಕೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಗರದ ತೊರವಿ ಹಕ್ಕಲದಲ್ಲಿ ಹೀಗೆ ಬಿದ್ದಿರುವ ಈ ಸ್ಯಾನಿಟೈಸರ್​ಗಳನ್ನು ನಶೆಗಾಗಿ ಬಳಕೆ ಮಾಡಿ ಎಸೆಯಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಲಾಕ್​ಡೌನ್ ಹಿನ್ನಲೆ ಯುವಕರು ನಶೆಗಾಗಿ ಯಾವುದೇ ಗಮ್, ಫ್ರೀ ಬಾಂಡ್ಸ್ ಪದಾರ್ಥಗಳು ಸಿಗದೆ ಇದೀಗ ಸ್ಯಾನಿಟೈಸರ್ ಬಳಕೆ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇನ್ನೂ ಈ ಕುರಿತು ಪೋಲಿಸರು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ABOUT THE AUTHOR

...view details