ಬೆಂಗಳೂರು: ಕೃಷಿಮೇಳ-2019ಕ್ಕಾಗಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) 40 ಎಕರೆ ಭೂಮಿಯಲ್ಲಿ ಖುಷ್ಕಿ ಬೇಸಾಯ ಅಥವಾ ಒಣ ಬೇಸಾಯ ಮಾಡಲಾಗಿದೆ. ಖುಷ್ಕಿ ಬೇಸಾಯದ ಪ್ರಾಮುಖ್ಯತೆ ಹಾಗೂ ಹವಾಮಾನ ವೈಪರೀತ್ಯಕ್ಕೆ ತಕ್ಕಂತೆ ಬೇಸಾಯ ಪದ್ಧತಿ ಇಲ್ಲಿ ಅಳವಡಿಸಲಾಗಿದ್ದು, ಮುಖ್ಯ ವಿಜ್ಞಾನಿ ಡಾ. ಮೂಡಲಗಿರಿಯಪ್ಪ ಈ ಬಗ್ಗೆ ಈಟಿವಿ ಭಾರತ್ಗೆ ವಿವರಣೆ ನೀಡಿದ್ದಾರೆ.