ಕರ್ನಾಟಕ

karnataka

By

Published : Mar 28, 2021, 2:19 PM IST

Updated : Mar 28, 2021, 3:07 PM IST

ETV Bharat / videos

ಹುಣ್ಣಿಮೆ ಎಫೆಕ್ಟ್: ನಂಜುಂಡೇಶ್ವರನ ದರ್ಶನಕ್ಕೆ ಹರಿದುಬಂದ ಭಕ್ತ ಸಮೂಹ

ಮೈಸೂರು: ಹುಣ್ಣಿಮೆ ಹಿನ್ನೆಲೆಯಲ್ಲಿ ನಂಜನಗೂಡಿನ ನಂಜುಂಡೇಶ್ವರನ ದರ್ಶನ ಪಡೆಯಲು ಭಕ್ತ ಸಾಗರವೇ ಹರಿದು ಬಂದಿದೆ. ಭಾನುವಾರದಂದು ಬೀಳುವ ಹುಣ್ಣಿಮೆಯೆಂದು ನಂಜುಂಡೇಶ್ವರನ ದರ್ಶನ ಪಡೆದರೆ ಒಳ್ಳೆಯದಾಗುತ್ತದೆ ಎಂಬ ಪ್ರತೀತಿ ಇದೆ. ಆದ್ದರಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಅಲ್ಲದೇ, ಮಾ.26 ರಂದು ನಡೆದ ಸರಳ ಪಂಚ ಮಹಾರಥೋತ್ಸವದಲ್ಲಿ ಸ್ಥಳೀಯರಿಗಷ್ಟೇ ಸೀಮಿತವಿದ್ದದರಿಂದ, ಇಂದು ನಂಜುಂಡೇಶ್ವರನ ದರ್ಶನ ಪಡೆಯಲು ರಾಜ್ಯದ ವಿವಿಧ ಮೂಲೆಗಳಿಂದ ಭಕ್ತಾದಿಗಳು ಆಗಮಿಸುತ್ತಿದ್ದಾರೆ.
Last Updated : Mar 28, 2021, 3:07 PM IST

ABOUT THE AUTHOR

...view details