ಕರ್ನಾಟಕ

karnataka

ETV Bharat / videos

ಎಮ್ಮೆ ವ್ಯಾಪಾರದಂತಾಗಿದೆ ಪಕ್ಷಾಂತರಿಗಳ ಹಾವಳಿ: ವಾಟಾಳ್​​ ಕಿಡಿ

By

Published : Apr 27, 2019, 6:55 PM IST

ಬೆಂಗಳೂರು: ರಾಜ್ಯದಲ್ಲಿ ಪಕ್ಷಾಂತರ ಪದ್ಧತಿ ಅತಿಯಾಗಿದ್ದು, ಪಕ್ಷಾಂತರಿಗಳ ಸದಸ್ಯತ್ವ ಕೂಡಲೇ ರದ್ದುಗೊಳಿಸಬೇಕೆಂದು ಒತ್ತಾಯಿಸಿ ವಾಟಾಳ್ ನಾಗರಾಜ್​, ನಗರದ ರಾಜಭವನದ ಮುಂದೆ ಪ್ರತಿಭಟನೆ ನಡೆಸಿದರು. ಕರ್ನಾಟಕದಲ್ಲಿ ಪಕ್ಷಾಂತರ ಹಾವಳಿ ಅತಿಯಾಗಿದೆ. ಪಕ್ಷಾಂತರಿಗಳ ಸದಸ್ಯತ್ವ ಕೂಡಲೇ ರದ್ದಾಗಬೇಕು. ಸುಮಾರು 15 ವರ್ಷಗಳಿಂದ ಶಾಸಕರನ್ನು ಖರೀದಿ ಮಾಡುವುದು, ಶಾಸಕರ ಕೈಯಲ್ಲಿ ರಾಜೀನಾಮೆ ಕೊಡಿಸುವುದು, ಮತ್ತೆ ಚುನಾವಣೆಗೆ ನಿಲ್ಲಿಸುವುದು ಲಂಗು ಲಗಾಮಿಲ್ಲದೆ “ಆಪರೇಷನ್" ಎಂಬ ಹೆಸರಿನಿಂದ ಸಾಗಿದೆ. ಆಪರೇಷನ್ ಅಂದ್ರೆ ಭಾರಿ ತ್ಯಾಗ ಎಂದು ತಿಳಿದುಕೊಂಡಿದ್ದಾರೆ ಅಂತ ಅಕ್ರೋಶ ಹೊರಹಾಕಿದರು.

ABOUT THE AUTHOR

...view details