ಕರ್ನಾಟಕ

karnataka

ಸ್ವಚ್ಛ ಬಳ್ಳಾರಿ ಅಭಿಯಾನ ಕಾರ್ಯಕ್ರಮ: ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಚಾಲನೆ

By

Published : Feb 13, 2021, 9:46 AM IST

ಬಳ್ಳಾರಿ: ಸ್ವಚ್ಛ ಬಳ್ಳಾರಿ ಅಭಿಯಾನ ಕಾರ್ಯಕ್ರಮಕ್ಕೆ ಮಹಾನಗರ ಪಾಲಿಕೆಯ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಮಹಾನಗರ ಪಾಲಿಕೆಯ ಕಚೇರಿ ಆವರಣದಲ್ಲಿ ಈ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಜಾಥ ಪಾಲಿಕೆಯ ಕಚೇರಿಯಿಂದ ಆರಂಭವಾಗಿ ಯುವಿ ಸರ್ಕಲ್, ರಾಯಲ್ ವೃತ್ತ, ಬೆಂಗಳೂರು ರಸ್ತೆ, ಬ್ರೂಸಪೇಟೆ ಮಾತ್ರವಾಗಿ ಮೇಣದಬತ್ತಿ ಹಿಡಿದು ಜಾಗೃತಿ ಮೂಡಿಸಲಾಯಿತು.‌ ಮುಖ್ಯವಾಗಿ ಆಯುಕ್ತೆ ಪ್ರೀತಿ ಗೆಹ್ಲೋಟ್ ಎರಡು ಕಿಲೋ ಮೀಟರ್ ಉದ್ದಕ್ಕೂ ಮೇಣದ ಬತ್ತಿ ಹಿಡಿದು ನಡೆದುಕೊಂಡು ಸ್ವಚ್ಛತೆ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು. ಈ ಜಾಗೃತಿ ಜಾಥದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರು, ಲಿಯ ಸೊಸೈಟಿ, ಎನ್.ಜಿ.ಒ ಸಂಸ್ಥೆಗಳ ಸದಸ್ಯರು ಭಾಗವಹಿಸಿದ್ದರು.

ABOUT THE AUTHOR

...view details