ರಾಯರ ಗೋ ಶಾಲೆಗೆ ಗ್ರಾಮವೊಂದರ ರೈತರಿಂದ 30 ಟ್ರಾಲಿ ಮೇವು ದಾನ - ರಾಯರ ಮಠಕ್ಕೆ ಮೇವು ದಾನ
🎬 Watch Now: Feature Video
ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದ ಗೋ ಶಾಲೆಗೆ ಜಿಲ್ಲೆಯ ಸಿರವಾರ ತಾಲೂಕಿನ ಭಾಗ್ಯನಗರ ಕ್ಯಾಂಪ್ ರೈತರು ಸುಮಾರು 30 ಟ್ರಾಕ್ಟರ್ ಟ್ರಾಲಿಗಳ ಮೇವನ್ನು ರಾಯರ ಮಠದ ಗೋ ಶಾಲೆಗಳಿಗೆ ದಾನ ಮಾಡಿದ್ದಾರೆ. ರಾಯರ ಅನುಗ್ರಹದಿಂದ ಗ್ರಾಮದಲ್ಲಿ ಉತ್ತಮ ಮಳೆ, ಬೆಳೆ ಬೆಳೆಯುತ್ತಿದ್ದು, ರೈತರಿಗೆ ಅನುಕೂಲವಾಗಿದೆ. ಹೀಗಾಗಿ ಗ್ರಾಮಸ್ಥರೆಲ್ಲರೂ ಸೇರಿ ದಾನ ಮಾಡುತ್ತಿರುವುದಾಗಿ ಹೇಳಿದ್ದಾರೆ.