ಬನ್ನಿ ಮಹಾಂಕಾಳಿಯ ಜಾತ್ರೆಯಲ್ಲಿ 'ಅಪ್ಪು'ಗೆ ಗೌರವ: ಫೋಟೊ ಹಿಡಿದು ಡ್ಯಾನ್ಸ್
ಗಂಗಾವತಿ: ದಿ.ನಟ ಪುನೀತ್ ರಾಜ್ಕುಮಾರ್ ಅಗಲಿ ನಾಲ್ಕೈದು ತಿಂಗಳು ಕಳೆದರೂ ಅಭಿಮಾನಿಗಳ ಹೃದಯದಿಂದ ಅವರು ದೂರವಾಗಿಲ್ಲ ಎಂಬುವುದಕ್ಕೆ ಇಂಥ ಘಟನೆಗಳೇ ಸಾಕ್ಷಿ. ತಾಲೂಕಿನ ಸಂಗಾಪುರ ಗ್ರಾಮದ ಬನ್ನಿ ಮಹಾಕಾಳಿಯ ದೇಗುಲದ 22ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಜಾತ್ರೆಯಲ್ಲಿ ಅಪ್ಪು ಅವರನ್ನು ಸ್ಮರಿಸಲಾಗಿದೆ. ದೇವತೆಗಳ ಭಾವಚಿತ್ರ ಇಡುವ ಸ್ಥಳದಲ್ಲಿ ಪುನೀತ್ ಚಿತ್ರ ಇಟ್ಟು ಪೂಜೆ ಸಲ್ಲಿಸಲಾಗಿದೆ. ಅಷ್ಟೇ ಅಲ್ಲ, ಹರಕೆ ಹೊತ್ತ ಶಸ್ತ್ರಧಾರಿಯೊಬ್ಬ ನಟನ ಭಾವಚಿತ್ರ ಹೊತ್ತು ಡ್ಯಾನ್ಸ್ ಮಾಡಿ ಗಮನ ಸೆಳೆದರು.
Last Updated : Feb 3, 2023, 8:22 PM IST