ಕರ್ನಾಟಕ

karnataka

ತಿರುಪತಿಗೆ ಸುದೀಪ್​ ಭೇಟಿ

By

Published : Jul 29, 2023, 3:53 PM IST

Updated : Jul 29, 2023, 5:48 PM IST

ETV Bharat / videos

ವಿಡಿಯೋ: ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಕಿಚ್ಚ ಸುದೀಪ್​

ತಿರುಪತಿ (ಅಂಧ್ರಪ್ರದೇಶ): ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಸುದೀಪ್ ಇಂದು ಪ್ರಸಿದ್ಧ ಧಾರ್ಮಿಕ ಕ್ಷೇತ್ರ ತಿರುಪತಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಪತ್ನಿ ಪ್ರಿಯಾ ಮತ್ತು ಕೆಲ ಆಪ್ತರು ಸುದೀಪ್​ ಅವರಿಗೆ ಸಾಥ್​ ನೀಡಿದರು. ಈ ಸಂದರ್ಭದಲ್ಲಿ ಮೆಚ್ಚಿನ ನಟನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು.

ತಿರುಪತಿ ದೇವಸ್ಥಾನದ (ಟಿಟಿಡಿ) ಅಧಿಕಾರಿಗಳು ಜನಪ್ರಿಯ ನಟನನ್ನು ಸ್ವಾಗತಿಸಿ ದರ್ಶನದ ವ್ಯವಸ್ಥೆ ಮಾಡಿದರು. ಬಳಿಕ ಸುದೀಪ್ ಗರ್ಭಗುಡಿಯಲ್ಲಿ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ನಮನ ಸಲ್ಲಿಸಿದರು.

ಇತ್ತೀಚೆಗೆ ಜುಲೈ 2ರಂದು ಕಿಚ್ಚ ಸುದೀಪ್​ ಅವರ 46ನೇ ಚಿತ್ರ ಘೋಷಣೆ ಆಗಿದ್ದು, ಮುಂದಿನ ಚಿತ್ರದ ಬಗ್ಗೆ ಅಭಿಮಾನಿಗಳ ಕುತೂಹಲಕ್ಕೆ ತೆರೆ ಬಿದ್ದಿತ್ತು. ಹೊಸ ಸಿನಿಮಾದ ಟೀಸರ್​ ಅನಾವರಣಗೊಂಡಿದ್ದು, ರಗಡ್​ ಲುಕ್​ನಲ್ಲಿ ಕಿಚ್ಚ ಮಿಂಚಿದ್ದಾರೆ. ಈ ಚಿತ್ರವು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿ 5 ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಪ್ಯಾನ್​ ಇಂಡಿಯಾ ಸಿನಿಮಾದ ಪ್ರೋಮೋಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದನ್ನೂ ಓದಿ:ಕರಣ್​ ಜೋಹರ್​ ತರಾಟೆಗೆ ತೆಗೆದುಕೊಂಡ ಕಂಗನಾ ರಣಾವತ್.. ಸೌತ್​ ಸ್ಟಾರ್ಸ್ ನೋಡಿ ಕಲಿಯಿರಿ ಎಂದು ರಣ್​ವೀರ್​ಗೆ ಸಲಹೆ

Last Updated : Jul 29, 2023, 5:48 PM IST

ABOUT THE AUTHOR

...view details