ನಿತೀಶ್ ಕುಮಾರ್ ನಿವೃತ್ತಿ ಹೇಳಿಕೆ: ಅವರ ಕೈಯಿಂದ ಬಿಹಾರ ನಿರ್ವಹಣೆ ಅಸಾಧ್ಯ ಎಂದ ತೇಜಸ್ವಿ!
ಬಿಹಾರ: ಮುಂದಿನ ಚುನಾವಣೆಯಲ್ಲಿ ತಾವು ಸ್ಪರ್ಧೆ ಮಾಡಲ್ಲ ಎಂದು ಹೇಳಿಕೆ ನೀಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ಗೆ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ತಿರುಗೇಟು ನೀಡಿದ್ದಾರೆ. ನಿತೀಶ್ ಕುಮಾರ್ ಜೀ ದಣಿದಿದ್ದಾರೆ. ಅವರಿಗೆ ಬಿಹಾರ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಈ ಹಿಂದಿನಿಂದಲೂ ನಾವು ಇದನ್ನು ಹೇಳುತ್ತಿದ್ದೇವೆ. ಈಗ ಚುನಾವಣಾ ಪ್ರಚಾರದ ಕೊನೆಯ ದಿನದಂದು ಅವರು ರಾಜಕೀಯ ನಿವೃತ್ತಿ ತೆಗೆದುಕೊಳ್ಳುವ ಘೋಷಣೆ ಮಾಡಿದ್ದಾರೆ. ಇದೀಗ ಅವರಿಗೆ ವಾಸ್ತವ ಅರಿವಾಗಿದೆ ಎಂದಿದ್ದಾರೆ.