ದಾರಿ ತಪ್ಪಿ ದನದ ಕೊಟ್ಟಿಗೆ ಪ್ರವೇಶಿಸಿದ ಚಿರತೆ ಮರಿ...ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಅರಣ್ಯ ಸಿಬ್ಬಂದಿ!
ಮುಂಬೈ: ಚಿರತೆ ಮರಿವೊಂದು ದಾರಿ ತಪ್ಪಿ ದನದ ಕೊಟ್ಟಿಗೆ ಪ್ರವೇಶಿಸಿರುವ ಘಟನೆ ಮಹಾರಾಷ್ಟ್ರದ ಮುಂಬೈನ ಆರೆ ಮಿಲ್ಕ್ ಕಾಲೋನಿಯಲ್ಲಿ ನಡೆದಿದೆ. ಅದನ್ನ ನೋಡಿರುವ ಸ್ಥಳೀಯರು ಓಡಿಸುವ ಯತ್ನ ನಡೆಸಿದ್ದಾರೆ. ತದನಂತರ ಅರಣ್ಯ ಸಿಬ್ಬಂದಿ ಸುರಕ್ಷಿತವಾಗಿ ಅದರ ರಕ್ಷಣೆ ಮಾಡಿ ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.