ಬದಕಲು ನೆರವು ನೀಡಿ, ಇಲ್ಲವೇ ಸಾಯಲು ಅನುಮತಿಸಿ!!
ಕ್ಯಾನ್ಸರ್ ಗಡ್ಡೆ ಆತನ ಅರ್ಧ ಮುಖವನ್ನೇ ವಿಕಾರಗೊಳಿಸಿದೆ. ಮೊಗದ ಅರ್ಧದಷ್ಟು ಆವರಿಸಿರುವ ಕ್ಯಾನ್ಸರ್ ಗಡ್ಡೆ ಆತನಿಗೆ ಬದುಕಲು ಬಿಡುತ್ತಿಲ್ಲ. ಹೀಗಾಗಿ ಆತ ಸಾಯಲು ದಯಾಮರಣ ಕೋರಿದ್ದಾನೆ. ಒಡಿಶಾದ ಬೋಲಂಗೀರ್ ಜಿಲ್ಲೆಯ ಮನಬೋಧಾನಿಗೆ 8ನೇ ತರಗತಿಯಲ್ಲೇ ಈ ಕ್ಯಾನ್ಸರ್ ಗಡ್ಡೆ ಬೆಳೆದಿತ್ತು. 2009ರಲ್ಲಿ ಆತ ಕಟಕ್ನಲ್ಲಿ ಆಪರೇಷನ್ ಮಾಡಿಸಿಕೊಂಡಿದ್ರೂ ಪ್ರಯೋಜನವಾಗಲಿಲ್ಲ. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಆ ಗಡ್ಡೆ ಆತನ ಆಕಾರವನ್ನೇ ವಿಕಾರಗೊಳಿಸಿದೆ. ಈ ಗಡ್ಡೆ ತೆಗೆಸಲು ನವದೆಹಲಿಯ ಏಮ್ಸ್ನಲ್ಲಿ ಆಪರೇಷನ್ ಮಾಡಿಸಬೇಕಾಗಿದ್ದು, ಒಡಿಶಾ ಲೋಕಸಭಾ ಭವನಕ್ಕೆ ತೆರಳಿದ್ದರೂ ಪ್ರಯೋಜನವಾಗಲಿಲ್ಲ. ಎನ್ಜಿಒ ಮೂಲಕ ಆರೋಗ್ಯ ಸಚಿವರನ್ನು ಭೇಟಿ ಮಾಡಿದ್ರೂ ಉಪಯೋಗವಾಗಲಿಲ್ಲ. ಹೀಗಾಗಿ ಆತ ನನಗೆ ಬದುಕಲು ನೆರವು ನೀಡಿ, ಇಲ್ಲವೇ ಸಾಯಲು ಅನುಮತಿಸಿ ಎಂದು ದಯಾಮರಣ ಕೋರಿದ್ದಾನೆ.