ಸುರಪುರ : ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಯುವಕ ನೀರುಪಾಲಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಗುರುಸಲಂ ಗ್ರಾಮದ ಬಳಿಯ ಭೀಮಾ ಬ್ರಿಡ್ಜ್ ಕಮ್ ಬ್ಯಾರೇಜ್ನಲ್ಲಿ ಸಂಭವಿಸಿದೆ.
ಸೋಮವಾರ ಎಲ್ಲೆಡೆ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ವೇಳೆ ಸುರಪುರ ತಾಲೂಕಿನ ಮುದ್ನಾಳ ದೊಡ್ಡ ತಾಂಡದ ಯುವಕರ ಗುಂಪು ಹಬ್ಬ ಆಚರಣೆ ನಂತರ ಮಧ್ಯಾಹ್ನ ನಗರಕ್ಕೆ ಹತ್ತಿರವಿರುವ ಗುಲಸರಂ ಬ್ರಿಡ್ಜ್ ಕಮ್ ಬ್ಯಾರೇಜ್ಗೆ ತೆರಳಿದೆ. ನದಿಯಲ್ಲಿ ಈಜಲು ಯುವಕರ ಗುಂಪು ನೀರಿಗೆ ಇಳಿದಿದ್ದು ಇವರಲ್ಲಿ ಟೋಪು ಶಂಕರ್ ಪವಾರ್ (22) ಎನ್ನುವ ಮುದ್ನಾಳ ದೊಡ್ಡ ತಾಂಡದ ಯುವಕ ಈಜು ಬಾರದೆ ಮುಳುಗಿದ್ದಾನೆ. ಆತನನ್ನು ಗಮನಿಸಿದ ಸ್ನೇಹಿತರು ನೀರಿನಿಂದ ರಕ್ಷಿಸಲು ಪ್ರಯತ್ನಿಸಿ ವಿಫಲರಾಗಿದ್ದು, ಪರಿಣಾಮ ಶಂಕರ್ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.