ಕರ್ನಾಟಕ

karnataka

By

Published : Mar 30, 2021, 3:43 AM IST

ETV Bharat / state

ಹೋಳಿ ಸಂಭ್ರಮದ ಬಳಿಕ ಈಜಲು ತೆರಳಿದ್ದ ಯುವಕ ನೀರುಪಾಲು

ಯಾದಗಿರಿ ಜಿಲ್ಲೆಯ ಗುರುಸಲಂ ಗ್ರಾಮದ ಬಳಿಯ ಭೀಮಾ ಬ್ರಿಡ್ಜ್ ಕಮ್ ಬ್ಯಾರೇಜ್ ನೀರಲ್ಲಿ ಮುಳುಗಿ ಯುವಕ ಮೃತಪಟ್ಟಿದ್ದಾನೆ.

young-man-dead-who-went-to-swim
ಹೋಳಿ ಸಂಭ್ರಮದ ಬಳಿಕ ಈಜಲು ತೆರಳಿದ್ದ ಯುವಕ ನೀರುಪಾಲು

ಸುರಪುರ : ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಯುವಕ ನೀರುಪಾಲಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಗುರುಸಲಂ ಗ್ರಾಮದ ಬಳಿಯ ಭೀಮಾ ಬ್ರಿಡ್ಜ್ ಕಮ್ ಬ್ಯಾರೇಜ್​ನಲ್ಲಿ ಸಂಭವಿಸಿದೆ.

ಸೋಮವಾರ ಎಲ್ಲೆಡೆ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ವೇಳೆ ಸುರಪುರ ತಾಲೂಕಿನ ಮುದ್ನಾಳ ದೊಡ್ಡ ತಾಂಡದ ಯುವಕರ ಗುಂಪು ಹಬ್ಬ ಆಚರಣೆ ನಂತರ ಮಧ್ಯಾಹ್ನ ನಗರಕ್ಕೆ ಹತ್ತಿರವಿರುವ ಗುಲಸರಂ ಬ್ರಿಡ್ಜ್ ಕಮ್​ ಬ್ಯಾರೇಜ್​ಗೆ ತೆರಳಿದೆ. ನದಿಯಲ್ಲಿ ಈಜಲು ಯುವಕರ ಗುಂಪು ನೀರಿಗೆ ಇಳಿದಿದ್ದು ಇವರಲ್ಲಿ ಟೋಪು ಶಂಕರ್ ಪವಾರ್ (22) ಎನ್ನುವ ಮುದ್ನಾಳ ದೊಡ್ಡ ತಾಂಡದ ಯುವಕ ಈಜು ಬಾರದೆ ಮುಳುಗಿದ್ದಾನೆ. ಆತನನ್ನು ಗಮನಿಸಿದ ಸ್ನೇಹಿತರು ನೀರಿನಿಂದ ರಕ್ಷಿಸಲು ಪ್ರಯತ್ನಿಸಿ ವಿಫಲರಾಗಿದ್ದು, ಪರಿಣಾಮ ಶಂಕರ್ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಬಾಲಕನ ಅನುಮಾನಾಸ್ಪದ ಸಾವು ಪ್ರಕರಣ.. ಇಬ್ಬರ ಬಂಧನ, ಪಿಎಸ್ಐ ಸೇರಿ ಮೂವರು ಸಿಬ್ಬಂದಿ ಅಮಾನತು

ವಿಷಯ ತಿಳಿದು ವಡಗೇರಾ ತಹಶೀಲ್ದಾರ್ ಸುರೇಶ ಅಂಕಲಗಿ, ಪಿಎಸ್ಐ ಸಿದ್ದರಾಯ ಬಳ್ಳೂರಗಿ ಘಟನಾ ಸ್ಥಳಕ್ಕೆ ಆಗಮಿಸಿ ಮೀನುಗಾರರ ಸಹಕಾರದಿಂದ ಶವ ಹೊರತೆಗೆದಿದ್ದಾರೆ. ಈ ಬಗ್ಗೆ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details