ಕರ್ನಾಟಕ

karnataka

ಪ್ರವಾಹದಲ್ಲಿ ತೇಲಿ ಬಂತು ಮತ್ತೊಂದು ಮೃತದೇಹ!

By

Published : Sep 8, 2019, 5:26 AM IST

ಬಸವ ಸಾಗರ ಜಲಾಶಯದಲ್ಲಿ ಒಳಹರಿವು ಹೆಚ್ಚಾದ ಹಿನ್ನಲೆಯಲ್ಲಿ ಕೃಷ್ಣ ನದಿಯ ಪ್ರವಾಹದ ಹಿನ್ನೀರಿನಲ್ಲಿ ಶವವೊಂದು ತೇಲಿ ಬಂದಿರುವ ಘಟನೆ ನಡೆದಿದೆ.

ತೇಲಿ ಬಂದ ಶವ

ಯಾದಗಿರಿ: ಕೃಷ್ಣ ನದಿಯ ಪ್ರವಾಹದ ಹಿನ್ನೀರಿನಲ್ಲಿ ಮೃತದೇಹವೊಂದು ತೇಲಿ ಬಂದಿರುವ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಗೌಡೂರ ಗ್ರಾಮದಲ್ಲಿ ನಡೆದಿದೆ.

ಜಿಲ್ಲೆಯ ಹುಣಸಗಿ ತಾಲೂಕಿನ ಬಸವ ಸಾಗರ ಜಲಾಶಯದಲ್ಲಿ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ, ಕೃಷ್ಣ ನದಿಗೆ ಸುಮಾರು ಒಂದೂವರೆ ಲಕ್ಷ ಸಾವಿರ ಕ್ಯೂಸೆಕ್ ನೀರು ಹರಿ ಬಿಡಲಾಗಿದೆ. ಕೃಷ್ಣೆಯ ಹಿನ್ನೀರಿನ ಒತ್ತಡದಿಂದ ಗೌಡೂರ ಗ್ರಾಮದಲ್ಲಿ ಶವವೊಂದು ತೇಲಿ ಬಂದಿದೆ.

ಜಿಲ್ಲೆಯ ನಾರಾಯಣಪುರ ಜಲಾಶಯದಿಂದ ಪ್ರವಾಹ ಹೆಚ್ಚಾಗಿರುವ ಕಾರಣ, ಗೌಡೂರ ಗ್ರಾಮಕ್ಕೆ ಮೃತದೇಹ ತೇಲಿ ಬಂದಿದೆ ಎಂದು ಶಹಾಪುರ ಪೊಲೀಸರು ಶಂಕಿಸಿದ್ದಾರೆ. ಹಿನ್ನೀರಿನಲ್ಲಿ ತೇಲಿ ಬಂದ ಶವ ಅನಾಮಧೇಯವಾಗಿದ್ದು , ಶವದ ಪರಿಚಯ ಸಿಗುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಶಹಾಪುರ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಮೃತದೇಹ ಇಡಲಾಗಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details