ಕರ್ನಾಟಕ

karnataka

ಯಾಳಗಿ ತಾಂಡಾಕ್ಕೆ ಶಾಸಕ ಪಿ.ರಾಜೀವ್ ಭೇಟಿ

By

Published : Oct 27, 2020, 8:34 AM IST

ಕರ್ನಾಟಕ ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಕುಡಚಿ ಶಾಸಕ ಪಿ.ರಾಜೀವ್ ಸುರಪುರ ತಾಲೂಕಿನ ಯಾಳಗಿ ತಾಂಡಾಕ್ಕೆ ಭೇಟಿ ನೀಡಿದರು.

MLA P Rajeev visits Yalagi Thanda
ಯಾಳಗಿ ತಾಂಡಾಕ್ಕೆ ಶಾಸಕ ಪಿ.ರಾಜೀವ್ ಭೇಟಿ

ಸುರಪುರ: ಕರ್ನಾಟಕ ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಕುಡಚಿ ಶಾಸಕ ಪಿ.ರಾಜೀವ್ ಯಾಳಗಿ ತಾಂಡಾಕ್ಕೆ ಭೇಟಿ ನೀಡಿ ಜನರ ಅಹವಾಲು ಸ್ವೀಕರಿಸಿದರು.

ಯಾಳಗಿ ತಾಂಡಾಕ್ಕೆ ಶಾಸಕ ಪಿ.ರಾಜೀವ್ ಭೇಟಿ

ಈ ಸಂದರ್ಭದಲ್ಲಿ ಶಾಸಕ ಪಿ.ರಾಜೀವ್ ಮಾತನಾಡಿ, ಇತ್ತೀಚೆಗೆ ಸುರಿದ ಮಹಾಮಳೆಯಿಂದ ಉತ್ತರ ಕರ್ನಾಟಕ ಭಾಗದಲ್ಲಿ ದೊಡ್ಡ ಮಟ್ಟದ ನಷ್ಟ ಉಂಟಾಗಿದೆ. ಅದರಂತೆ ಅನೇಕ ಬಂಜಾರ ಸಮುದಾಯದ ತಾಂಡಾಗಳು ಕೂಡ ಹಾನಿಗೊಳಗಾಗಿವೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಮಾರ್ಗದರ್ಶನದಂತೆ ಹಾನಿಗೊಳಗಾದ ತಾಂಡಾಗಳಿಗೆ ಭೇಟಿ ನೀಡುತ್ತಿದ್ದು, ಯಾವ ತಾಂಡಗಳಲ್ಲಿ ಎಷ್ಟು ಹಾನಿಯಾಗಿದೆ ಹಾಗೂ ತಾಂಡದ ಜನರ ಸಮಸ್ಯೆಗಳನ್ನು ನಿವಾರಿಸಲು ನಮ್ಮ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಯಾಳಗಿ ತಾಂಡಾದ ಜನರು ಕೂಡ ಅಹವಾಲು ಸಲ್ಲಿಸಿದ್ದು, ಇಲ್ಲಿಯ ಜನರ ಬೇಡಿಕೆಯಂತೆ ಸಮುದಾಯ ಭವನ ನಿರ್ಮಾಣಕ್ಕೆ ಸ್ಥಳೀಯ ಶಾಸಕರಿಗೂ ಕೂಡ ಸಂಪರ್ಕಿಸುವುದಾಗಿ ಭರವಸೆ ನೀಡಿದರು.

ABOUT THE AUTHOR

...view details