ಕರ್ನಾಟಕ

karnataka

ಜಿಲ್ಲೆಯಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಡಿ-ಬಾಸ್‌ ಕುರುಕ್ಷೇತ್ರ..

By

Published : Aug 13, 2019, 9:09 AM IST

ಜಿಲ್ಲೆಯಲ್ಲಿ ಕುರುಕ್ಷೇತ್ರ ಚಿತ್ರ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದ್ದು, ದಿನಕ್ಕೆ ಮೂರು ಶೋಗಳು ಪ್ರದರ್ಶಿಸಲಾಗುತ್ತಿದೆ. ಚಿತ್ರವನ್ನು ವೀಕ್ಷಿಸಲು ಅಭಿಮಾನಿಗಳು ಪಕ್ಕದ ಜಿಲ್ಲೆಗಳಿಂದಲೂ ಆಗಮಿಸುತ್ತಿದ್ದಾರೆ.

ಕುರುಕ್ಷೇತ್ರ ಚಿತ್ರ

ಯಾದಗಿರಿ :ಜಿಲ್ಲೆಯ ಶಹಾಪುರ ತಾಲೂಕಿನ ಜಯಶ್ರೀ ಚಿತ್ರ ಮಂದಿರದಲ್ಲಿ ಕುರುಕ್ಷೇತ್ರ ಚಿತ್ರ ಅಬ್ಬರಿಸಿ ಬೊಬ್ಬಿರಿಸುತ್ತಿದ್ದು, ದಚ್ಚು ಅಭಿಮಾನಿಗಳು ಪುಲ್ ಫಿದಾ ಆಗಿದ್ದಾರೆ.

ಕುರುಕ್ಷೇತ್ರ ಚಿತ್ರ ವೀಕ್ಷಿಸಿದ ಅಭಿಮಾನಿಗಳು..

ಜಿಲ್ಲೆಯಲ್ಲಿ ಕುರುಕ್ಷೇತ್ರ ಚಿತ್ರ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದ್ದು, ದಿನಕ್ಕೆ ಮೂರು ಶೋಗಳು ಪ್ರದರ್ಶಿಸಲಾಗುತ್ತಿದೆ. ಕುರುಕ್ಷೇತ್ರ ಅಭಿಮಾನಿಗಳಿಗೆ ರಸದೌತಣವನ್ನು ನೀಡುತ್ತಿದ್ದು, ಚಿತ್ರವನ್ನು ವೀಕ್ಷಿಸಲು ಅಭಿಮಾನಿಗಳು ಪಕ್ಕದ ಜಿಲ್ಲೆಗಳಿಂದಲೂ ಆಗಮಿಸುತ್ತಿದ್ದಾರೆ.

ಚಿತ್ರ ಮಂದಿರದ ಆವರಣದ ಗೇಟ್‌ನ ಮುಂಭಾಗದಲ್ಲಿ ಸಾವಿರಾರು ಅಭಿಮಾನಿಗಳು ಟಿಕೇಟ್​ಗಾಗಿ ಮುಂಜಾನೆಯಿಂದಲೇ ಜಮಾಯಿಸುತ್ತಿದ್ದು, ಟಿಕೇಟ್​ ಸಿಗದೆ ಪರದಾಡುತ್ತಿದ್ದಾರೆ. ಥಿಯೇಟರ್ ಹೌಸ್‌ಫುಲ್‌ ಆಗಿದ್ರೂ ಚಿತ್ರ ವೀಕ್ಷಿಸಲು ಬಿಡುವಂತೆ ಮಾಲೀಕರಿಗೆ ಆಗ್ರಹಿಸುತ್ತಿದ್ದಾರೆ.

ABOUT THE AUTHOR

...view details