ಕರ್ನಾಟಕ

karnataka

ETV Bharat / state

ಓಪನ್​​ ಜಿಮ್​​ಗೆ ತಟ್ಟಿದ ಕಳಪೆ ಕಾಮಗಾರಿ ಬಿಸಿ

ವಿಜಯಪುರ ಜಿಲ್ಲೆಯ ಗುರುಪಾದೇಶ್ವರ ನಗರದ ಉದ್ಯಾನವನದಲ್ಲಿ ಓಪನ್​ ಜಿಮ್​ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ನಡೆದಿರುವ ಆರೋಪ ಕೇಳಿ ಬಂದಿದೆ.

By

Published : Jul 10, 2019, 5:05 PM IST

ಓಪನ್ ಜಿಮ್ ಗೆ ತಟ್ಟಿದ ಕಳಪೆ ಕಾಮಗಾರಿ ಬಿಸಿ

ವಿಜಯಪುರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಅಮೃತ ಯೋಜನೆಯಡಿ ಉದ್ಯಾನವನದಲ್ಲಿ ವಾಯು ವಿಹಾರಿಗಳಿಗೆ ದೈಹಿಕ ಕಸರತ್ತು ಮಾಡಲು ವಿಜಯಪುರ ಮಹಾನಗರ ಪಾಲಿಕೆ ಆರಂಭಿಸಿರುವ ಓಪನ್ ಜಿಮ್​​ಗೆ ಕಳಪೆ ಕಾಮಗಾರಿಯ ಬಿಸಿ ತಟ್ಟಿದೆ ಎನ್ನಲಾಗಿದೆ.

ಓಪನ್ ಜಿಮ್​​ಗೆ ತಟ್ಟಿದ ಕಳಪೆ ಕಾಮಗಾರಿ ಬಿಸಿ

ವಿಜಯಪುರ ಮಹಾನಗರ ಪಾಲಿಕೆಯಾದ ಮೇಲೆ ಮೊದಲ ಬಾರಿಗೆ ಬೆಂಗಳೂರು ಹೊರತುಪಡಿಸಿ ವಿಜಯಪುರ ಜಿಲ್ಲೆಯ ಗುರುಪಾದೇಶ್ವರ ನಗರದ ಉದ್ಯಾನವನದಲ್ಲಿ ಓಪನ್ ಜಿಮ್ ಆರಂಭಿಸಲಾಗಿದೆ. ಒಟ್ಟು 14 ಉದ್ಯಾನವನದಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಓಪನ್ ಜಿಮ್​​ಗಳನ್ನು ಆರಂಭಿಸಲಾಗಿದೆ. ಬೆಳಗ್ಗೆ ವಾಯು ವಿಹಾರಕ್ಕೆ ಬರುವ ಸಾರ್ವಜನಿಕರಿಗೆ ವಾಕಿಂಗ್ ಟ್ರ್ಯಾಕ್ ಜತೆ ದೈಹಿಕ ಕಸರತ್ತು ಮಾಡಲು ಓಪನ್ ಜಿಮ್ ನಿರ್ಮಾಣ ಮಾಡಲಾಗಿದೆ.

ಪ್ರತೀ ಉದ್ಯಾನವನದಲ್ಲಿ 4ರಿಂದ 7 ಲಕ್ಷ ಖರ್ಚು ಮಾಡಿ ಜಿಮ್​​ ನಿರ್ಮಾಣ ಮಾಡಲಾಗಿದೆ. ಉಪಕರಣಗಳ ಫಿಟ್ಟಿಂಗ್ ಮಾಡುವಲ್ಲಿ ಮಹಾನಗರ ಪಾಲಿಕೆ ಸಿಬ್ಬಂದಿ ತೋರಿದ ನಿರ್ಲಕ್ಷ್ಯದಿಂದ ಉಪಕರಣಗಳ ಜೋಡಣೆಗೆ ಬಳಸಿದ ಸಿಮೆಂಟ್ ಕಿತ್ತು ಹೋಗಿ ಮಹಿಳೆಯೊಬ್ಬರು ಬಿದ್ದು ಗಾಯಗೊಂಡಿದ್ದಾಋಎ. ಇದರಿಂದ ಸಾರ್ವಜನಿಕರು ಜಿಮ್​ ಮಾಡಲು ಹಿಂಜರಿಯುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ABOUT THE AUTHOR

...view details