ಕರ್ನಾಟಕ

karnataka

By

Published : Oct 20, 2020, 5:36 PM IST

Updated : Oct 20, 2020, 5:46 PM IST

ETV Bharat / state

ಮನೆ ಸ್ವಚ್ಛಗೊಳಿಸುವಾಗ ಹಗೆಯಲ್ಲಿ ಬಿದ್ದ ಮಹಿಳೆ ರಕ್ಷಿಸಿದ ಗ್ರಾಮಸ್ಥರು

ಹಬ್ಬ ಇರುವುದರಿಂದ ಸುನಂದಾ ಸ್ವಚ್ಛಗೊಳಿಸಲೆಂದು ಮನೆಗೆ ತೆರಳಿದ್ದರು. ಈ ವೇಳೆ ಆಕಸ್ಮಿಕವಾಗಿ ಹಗೆಗೆ ಬಿದ್ದಿದ್ದರು. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಕೆಳಗಿಳಿದು ಮಹಿಳೆ ಸುನಂದಾಳನ್ನು ರಕ್ಷಿಸಿದ್ದಾರೆ. ಪ್ರವಾಹದಿಂದ ತಗ್ಗು ಪ್ರದೇಶಕ್ಕೆ ನೀರು ನುಗ್ಗಿದ್ದರಿಂದ ಇಂತಹ ಸಾಕಷ್ಟು ಆವಾಂತರ ಸಂಭವಿಸುತ್ತಿವೆ..

Woman Rescued After Being Locked Inside The Cold Storage
ಹಗೆಯಲ್ಲಿ ಬಿದ್ದಿದ್ದ ಮಹಿಳೆ ರಕ್ಷಣೆ

ವಿಜಯಪುರ:ತೆರೆದಿದ್ದ ಹಗೆಯಲ್ಲಿ ಆಕಸ್ಮಿಕವಾಗಿ ಬಿದ್ದಿದ್ದ ಮಹಿಳೆಯನ್ನು ಗ್ರಾಮಸ್ಥರು ರಕ್ಷಿಸಿದ ಘಟನೆ ಇಂಡಿ ತಾಲೂಕಿನ ಭುಯ್ಯಾರ ಗ್ರಾಮದಲ್ಲಿ ನಡೆದಿದೆ. ಸುನಂದಾ ನಾಟಿಕಾರ ಸಾವಿನ ದವಡೆಯಿಂದ ಪಾರಾಗಿರುವ ಮಹಿಳೆ.

ಹಗೆಯಲ್ಲಿ ಬಿದ್ದಿದ್ದ ಮಹಿಳೆ ಸುನಂದಾ ನಾಟಿಕಾರ

ಭೀಮಾ ನದಿಯ ಪ್ರವಾಹದಿಂದ ಭುಯ್ಯಾರ ಗ್ರಾಮ ಸಂಪೂರ್ಣ ಮುಳುಗಡೆಯಾಗಿತ್ತು. ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಗ್ರಾಮಕ್ಕೆ ಹೊಕ್ಕಿದ್ದ ನೀರಿನ ಪ್ರಮಾಣವೂ ಸಹ ತಗ್ಗಿತ್ತು. ಹಬ್ಬ ಇರುವುದರಿಂದ ಸುನಂದಾ ಸ್ವಚ್ಛಗೊಳಿಸಲೆಂದು ಮನೆಗೆ ತೆರಳಿದ್ದರು. ಈ ವೇಳೆ ಆಕಸ್ಮಿಕವಾಗಿ ಹಗೆಗೆ ಬಿದ್ದಿದ್ದರು. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಕೆಳಗಿಳಿದು ಮಹಿಳೆ ಸುನಂದಾಳನ್ನು ರಕ್ಷಿಸಿದ್ದಾರೆ. ಪ್ರವಾಹದಿಂದ ತಗ್ಗು ಪ್ರದೇಶಕ್ಕೆ ನೀರು ನುಗ್ಗಿದ್ದರಿಂದ ಇಂತಹ ಸಾಕಷ್ಟು ಆವಾಂತರಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ತೆರೆದ ಹಗೆ
Last Updated : Oct 20, 2020, 5:46 PM IST

ABOUT THE AUTHOR

...view details