ಕರ್ನಾಟಕ

karnataka

By

Published : Sep 13, 2019, 5:42 PM IST

ETV Bharat / state

ತಾರಾಪುರ ಗ್ರಾಮದಲ್ಲಿ ಪ್ರವಾಹ ಭೀತಿ; ಬೈಕ್‌ ಹೊತ್ತು ದಡ ಸೇರಿದ ವ್ಯಕ್ತಿ! ವಿಡಿಯೋ

ಭೀಮಾ ನದಿಗೆ ಮಹಾರಾಷ್ಟ್ರದಿಂದ ನೀರು ಬಿಟ್ಟ ಪರಿಣಾಮ ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದ ತಾರಾಪುರ ಗ್ರಾಮಕ್ಕೆ ಪ್ರವಾಹ ಭೀತಿ ಎದುರಾಗಿದೆ.

ತಾರಾಪುರ ಗ್ರಾಮಕ್ಕೆ ಪ್ರವಾಹ ಭೀತಿ

ವಿಜಯಪುರ: ಭೀಮಾನದಿಗೆ ಮಹಾರಾಷ್ಟ್ರದ ಉಜನಿ ಡ್ಯಾಂನಿಂದ 28 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದ ತಾರಾಪುರ ಗ್ರಾಮಕ್ಕೆ ಪ್ರವಾಹ ಸಂಕಷ್ಟ ಎದುರಾಗಿದೆ‌.

ತಾರಾಪುರ ಗ್ರಾಮಕ್ಕೆ ಪ್ರವಾಹ ಭೀತಿ

ತಾರಾಪುರ ಗ್ರಾಮ ಜಲಾವೃತವಾಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ತಾರಾಪುರ ಗ್ರಾಮಕ್ಕೆ ಹೋಗಬೇಕಿದ್ರೆ ಜನರು ಎದೆವರೆಗಿನ ನೀರು ದಾಟಿ ಸಾಗಬೇಕಿದೆ. ಈ ವೇಳೆ ವ್ಯಕ್ತಿಯೊಬ್ಬ ತನ್ನ ಬೈಕನ್ನು ಹೆಗಲ ಮೇಲೆ ಹೊತ್ತುಕೊಂಡು ನೀರಿನಲ್ಲಿ ನಡೆದುಕೊಂಡು ದಡ ಸೇರಿರುವ ವಿಡಿಯೋ ವೈರಲ್ ಆಗಿದೆ.

ಪ್ರವಾಹ ಹಿನ್ನೆಲೆಯಲ್ಲಿ ಸೂಕ್ತ ಸೌಲಭ್ಯ ಒದಗಿಸದ ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧ ತಾರಾಪುರ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ABOUT THE AUTHOR

...view details