ಕರ್ನಾಟಕ

karnataka

By

Published : Dec 15, 2020, 1:30 PM IST

ETV Bharat / state

ರಂಗೇರುತ್ತಿರುವ ಗ್ರಾ.ಪಂ. ಚುನಾವಣೆ: ಒಂದೇ ವಾರ್ಡ್​​ನಲ್ಲಿ ಕಣಕ್ಕಿಳಿದ ಪತಿ-ಪತ್ನಿ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸಿದ್ದಾಪೂರ ಪಿ.ಟಿ ಗ್ರಾಮದಲ್ಲಿ ಒಂದೇ ವಾರ್ಡಿನಲ್ಲಿ ದಂಪತಿ ಸ್ಪರ್ಧೆಗಿಳಿಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

couple contest in village panchayath
ಚುನಾವಣೆಗೆ ದಂಪತಿ ಸ್ಪರ್ಧೆ

ಮುದ್ದೇಬಿಹಾಳ:ತಾಲೂಕಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಕಾವು ಜೋರಾಗಿದ್ದು, ಈ ಬಾರಿ ಒಂದೇ ವಾರ್ಡಿಗೆ ದಂಪತಿ ಸ್ಪರ್ಧಿಸುವ ಮೂಲಕ ಕುತೂಹಲ ಮೂಡಿಸಿದ್ದಾರೆ.

ಚುನಾವಣೆಗೆ ದಂಪತಿ ಸ್ಪರ್ಧೆ

ತಾಲೂಕಿನ ಬಸರಕೋಡ ಗ್ರಾ.ಪಂ. ವ್ಯಾಪ್ತಿಯ ಸಿದ್ದಾಪೂರ ಪಿ.ಟಿ ಗ್ರಾಮದಲ್ಲಿ ಒಂದೇ ವಾರ್ಡಿನಲ್ಲಿ ದಂಪತಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಆ ಮೂಲಕ ಪಂಚಾಯಿತಿ ಗಮನ ತಮ್ಮತ್ತ ಸೆಳೆಯುವಂತೆ ಮಾಡಿದ್ದಾರೆ. ಬಸರಕೋಡ ಪಂಚಾಯಿತಿ ವ್ಯಾಪ್ತಿಯ ಸಿದ್ದಾಪೂರದ ವಾರ್ಡ ಸಂಖ್ಯೆ 5 ರಲ್ಲಿ ಸಾಮಾನ್ಯ ವರ್ಗದಿಂದ ಗುರುಪಾದಪ್ಪ ಚೆನ್ನಪ್ಪ ಗೋಡೇಕಾರ ಹಾಗೂ ಅದೇ ವಾರ್ಡನ ಹಿಂದುಳಿದ ವರ್ಗ 'ಎ' ಮಹಿಳೆ ಮೀಸಲಾತಿ ಅಡಿ ಅವರ ಪತ್ನಿ ಜಯಶ್ರೀ ಗುರುಪಾದಪ್ಪ ಗೋಡೇಕಾರ ಕಣದಲ್ಲಿ ಉಳಿದಿದ್ದಾರೆ.

ಚುನಾವಣೆಗೆ ದಂಪತಿ ಸ್ಪರ್ಧೆ

ಈ ಸ್ಪರ್ಧೆ ಗ್ರಾಮಸ್ಥರಲ್ಲಿ ವಿಶೇಷ ಎನಿಸಿದ್ದು, ತಾಲೂಕಿನಲ್ಲಿ ಪತಿ ಪತ್ನಿ ಸ್ಪರ್ಧಿಸಿದ ಕಣ ಎಂದು ಹೆಸರಾಗಿದೆ. ಹಿಂದಿನ ಪಂಚಾಯಿತಿ ಸದಸ್ಯರಾಗಿರುವ ಗುರುಪಾದಪ್ಪ ಗೋಡೇಕಾರ ಮತ್ತೊಮ್ಮೆ ಅಧಿಕಾರ ಪಡೆಯಲು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅವರ ಪತ್ನಿ ಜಯಶ್ರೀ ಮೊದಲನೇ ಸಲ ತಮ್ಮ ಅದೃಷ್ಟ ಪರೀಕ್ಷೆಗೆ ಜನರ ಮುಂದೆ ಹೋಗುತ್ತಿದ್ದಾರೆ.

ಓದಿ: ವಿಷಯಾಧಾರಿತವಾಗಿ ಬಿಜೆಪಿಗೆ ಬೆಂಬಲ ನೀಡಿದ್ದೇವೆ : ಬಸವರಾಜ ಹೊರಟ್ಟಿ

ABOUT THE AUTHOR

...view details