ಕರ್ನಾಟಕ

karnataka

By

Published : Oct 6, 2020, 2:00 PM IST

ETV Bharat / state

ವಿಜಯಪುರ: ಮನೆ ಬೀಗ ಮುರಿದು 3 ಲಕ್ಷ ರೂ. ನಗದು, 40 ಗ್ರಾಂ ಚಿನ್ನಾಭರಣ ದರೋಡೆ

ಕೊಲ್ಹಾರ ಪಟ್ಟಣದ ಸಿದ್ದಲಿಂಗಪ್ಪ ಪೂಜಾರಿ ಎಂಬುವರಿಗೆ ಸೇರಿದ ಮನೆಯಲ್ಲಿ ಸುಮಾರು 3 ಲಕ್ಷ ರೂಪಾಯಿ ನಗದು, 40 ಗ್ರಾಂ ಚಿನ್ನಾಭರಣ ಕದ್ದು ಖದೀಮರು ಪರಾರಿಯಾಗಿದ್ದಾರೆ.

house_thift
ಚಿನ್ನಾಭರಣ ಕಳವು

ವಿಜಯಪುರ:ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ಮನೆ ಬೀಗ ಮುರಿದಿರುವ ಖದೀಮರು ಲಕ್ಷಾಂತರ ರೂ. ಬೆಲೆ ಬಾಳುವ ನಗದು, ಚಿನ್ನಾಭರಣ ಕದ್ದೊಯ್ದಿದ್ದಾರೆ.

ಮನೆ ಬೀಗ ಮುರಿದು 3 ಲಕ್ಷ ರೂ. ದರೋಡೆ

ಕೊಲ್ಹಾರ ಪಟ್ಟಣದ ಸಿದ್ದಲಿಂಗಪ್ಪ ಪೂಜಾರಿ ಎಂಬುವರಿಗೆ ಸೇರಿದ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯ ಬೀಗ ಮುರಿದಿರುವ ಕಳ್ಳರು ಬೆಡ್ ರೂಂನಲ್ಲಿದ್ದ ಅಲ್ಮೇರಾ ಒಡೆದು ಚಿನ್ನಾಭರಣಕ್ಕೆ ಹುಡುಕಾಟ ನಡೆಸಿದ್ದಾರೆ. ಅಲ್ಮೇರಾದಲ್ಲಿ ಎಲ್ಲ ವಸ್ತುಗಳನ್ನು ಚೆಲ್ಲಿ ನಗದು, ಚಿನ್ನಾಭರಣ ಕದ್ದಿದ್ದಾರೆ.

3 ಲಕ್ಷ ರೂಪಾಯಿ ನಗದು, 40 ಗ್ರಾಂ ಚಿನ್ನಾಭರಣ ಕದ್ದು ಖದೀಮರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ABOUT THE AUTHOR

...view details