ಕರ್ನಾಟಕ

karnataka

By

Published : Oct 11, 2020, 5:03 PM IST

ETV Bharat / state

ಮಾಜಿ ಶಾಸಕ ನಾಡಗೌಡ ಜನ್ಮದಿನ, ಅಭಿಮಾನಿಗಳಿಂದ ವಿವಿಧ ಕಾರ್ಯಕ್ರಮ

ಮಾಜಿ ಶಾಸಕ ಸಿ.ಎಸ್.ನಾಡ ಗೌಡ ಅಪ್ಪಾಜಿ ಜನ್ಮದಿನಕ್ಕೆ ಕರ್ನಾಟಕ ಆಹಾರ ಪೂರೈಕೆ ನಿಗಮದ ಅಧ್ಯಕ್ಷ, ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಶುಭಕೋರಿದ್ದಾರೆ.

former-mla-nadagowda-birthday-muddebihala-news
ಮಾಜಿ ಶಾಸಕ ನಾಡಗೌಡ ಜನ್ಮದಿನ, ಅಭಿಮಾನಿಗಳಿಂದ ವಿವಿಧ ಕಾರ್ಯಕ್ರಮ..

ಮುದ್ದೇಬಿಹಾಳ: ಮಾಜಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರ 63ನೇ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ವಿವಿಧ ಕಾರ್ಯಕ್ರಮಗಳನ್ನು ನಡೆಸಿದರು.

ಮಾಜಿ ಶಾಸಕ ನಾಡಗೌಡ ಜನ್ಮದಿನ, ಅಭಿಮಾನಿಗಳಿಂದ ವಿವಿಧ ಕಾರ್ಯಕ್ರಮ..

ಯರಝರಿ ಜಿ.ಪಂ.ಕ್ಷೇತ್ರದ ಮುಖಂಡ ಸಂತೋಷ ಚವ್ಹಾಣ (ಹುಲ್ಲೂರ) ನೇತೃತ್ವದಲ್ಲಿ, ನಾಡಗೌಡರ ಹೆಸರಿನಲ್ಲಿ ಯಲಗೂರ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ, ರುದ್ರಾಭಿಷೇಕ ನಡೆಸಲಾಯಿತು.

ನಾಡಗೌಡರ ಜನ್ಮದಿನಕ್ಕೆ ಶುಭ ಕೋರಿದ ಶಾಸಕ ನಡಹಳ್ಳಿ:

ಮಾಜಿ ಶಾಸಕ ಸಿಎಸ್ ನಾಡಗೌಡ ಅಪ್ಪಾಜಿ ಜನ್ಮದಿನಕ್ಕೆ, ಕರ್ನಾಟಕ ಆಹಾರ ಪೂರೈಕೆ ನಿಗಮದ ಅಧ್ಯಕ್ಷ, ಶಾಸಕ ಎಎಸ್ ಪಾಟೀಲ ನಡಹಳ್ಳಿ ಶುಭಕೋರಿದ್ದಾರೆ.

ಬಾಣಂತಿಯರಿಗೆ ಮಾಸ್ಕ್, ಹಣ್ಣು ವಿತರಣೆ:

ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಬ್ಲಾಕ್ ಕಾಂಗ್ರೆಸ್, ಎನ್ಎಸ್​​ಯೂಐ, ಯುವ ಕಾಂಗ್ರೆಸ್, ಮಜ್ದೂರ್ ಹಾಗೂ ಸಮಸ್ತ ನಾಡಗೌಡರ ಅಭಿಮಾನಿಗಳ ಬಳಗದಿಂದ ಆಸ್ಪತ್ರೆಯಲ್ಲಿದ್ದ ಬಾಣಂತಿಯರಿಗೆ, ರೋಗಿಗಳಿಗೆ ಆಸ್ಪತ್ರೆಯ ಸಿಬ್ಬಂದಿಗೆ ಹಣ್ಣು,ಸಿಹಿತಿಂಡಿ ವಿತರಿಸಿದರು. ಇದೇ ವೇಳೆ ಕಾರ್ಯಕರ್ತರು ಮಾಸ್ಕ್ ವಿತರಿಸಿದರು.

ABOUT THE AUTHOR

...view details