ಕರ್ನಾಟಕ

karnataka

ETV Bharat / state

ಗೋವು ಸಾಗಿಸುತ್ತಿದ್ದ ವಾಹನ-ಕಾರಿನ ನಡುವೆ ಡಿಕ್ಕಿ: ಬಂಥನಾಳ ಶ್ರೀಗಳಿಗೆ ಗಾಯ

ಗೋವು ಸಾಗಿಸುತ್ತಿದ್ದ ವಾಹನ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಬಂಥನಾಳ ಶ್ರೀಗಳು ಅಪಾಯದಿಂದ ಪಾರಾಗಿದ್ದಾರೆ.

By

Published : Mar 18, 2019, 5:27 PM IST

ಬಂಥನಾಳ ಶ್ರೀಗಳಿಗೆ ಗಾಯ

ವಿಜಯಪುರ: ಗೋವು ಸಾಗಿಸುತ್ತಿದ್ದ ವಾಹನ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಬಂಥನಾಳ ಶ್ರೀಗಳು ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಆಕಳು ಸಹ ಮೃತಪಟ್ಟಿದೆ. ಇಂಡಿ ತಾಲೂಕಿನ ನಂದ್ರಾಳ ಕ್ರಾಸ್ ಬಳಿ ಈ ಅವಘಡ ನಡೆದಿದೆ.

ಏರ್ ಬ್ಯಾಗ್​ನಿಂದಾಗಿ ಶ್ರೀಗಳು ಅಪಾಯದಿಂದ ಪಾರಾಗಿದ್ದು, ಅವರನ್ನು ಸೊಲ್ಲಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೊಲ್ಲಾಪುರದಿಂದ ವಿಜಯಪುರ ಕಡೆಗೆ ಬಂಥನಾಳ ಸ್ವಾಮೀಜಿಗಳು ಆಗಮಿಸುತ್ತಿದ್ದರು.ಇದೇ ಸಂದರ್ಭದಲ್ಲಿ ಸೊಲ್ಲಾಪುರಕ್ಕೆ ಅಕ್ರಮವಾಗಿ ವಾಹನವೊಂದರಲ್ಲಿ ಖದೀಮರು ಗೋವುಗಳನ್ನು ಸಾಗಿಸುತ್ತಿದ್ದರು. ಈ ವೇಳೆ ಕಾರ್ ಹಾಗೂ 407 ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ.

ಬಂಥನಾಳ ಶ್ರೀಗಳಿಗೆ ಗಾಯ

ಈ ವೇಳೆ ರೊಚ್ಚಿಗೆದ್ದ ನಂದ್ರಾಳ್ ಹಾಗೂ ಭತಗುಣಕಿ ಗ್ರಾಮಸ್ಥರು ಗೋವು ಸಾಗಿಸುತ್ತಿದ್ದ 6 ಜನರನ್ನು ತರಾಟೆಗೆ ತೆಗೆದುಕೊಂಡು, ಖದೀಮರನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ. ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details