ಕರ್ನಾಟಕ

karnataka

ETV Bharat / state

ಎಳೆ ಜೀವಕ್ಕೆ ಬಾಧಿಸಿದ ಮಹಾಮಾರಿ ಕ್ಯಾನ್ಸರ್! ಬಾಲಕನ ಪ್ರಾಣ ಉಳಿಸುವಿರಾ ಸಹೃದಯರೇ?

ಆಡಿ ಬೆಳೆಯಬೇಕಾದ ಕಂದಮ್ಮಗೆ ಮಹಾಮಾರಿ ಕ್ಯಾನ್ಸರ್ ಬಾಧಿಸಿದೆ. ಬಾಲಕನ ಜೀವ ಉಳಿಸಿಕೊಳ್ಳಲು ಪರದಾಟ ನಡೆಸುತ್ತಿರುವ ಬಡ ತಂದೆ-ತಾಯಿ ಕೈಲಾದ ಸಹಾಯಕ್ಕಾಗಿ ಅಂಗಲಾಚಿ ಬೇಡುತ್ತಿದ್ದಾರೆ.

By

Published : Jun 13, 2019, 9:29 PM IST

ಮಹಾಮಾರಿ ಕ್ಯಾನ್ಸರ್​ನಿಂದ ಬಳಲುತ್ತಿರುವ ನಾಲ್ಕು ವರ್ಷದ ಮಗು

ಕಾರವಾರ:ಆಡಿ ಬೆಳೆಯಬೇಕಾದ ನಾಲ್ಕು ವರ್ಷದ ಕಂದಮ್ಮಗೆ ಮಹಾಮಾರಿ ಕ್ಯಾನ್ಸರ್​ ಬಾಧಿಸಿದ್ದು ಮಗುವಿನ ಚಿಕಿತ್ಸೆ ವೆಚ್ಚ ಭರಿಸಲಾಗದೆ ಬಡ ತಂದೆ-ತಾಯಿ ಇದೀಗ ಸಹೃದಯಿಗಳ ಮೊರೆ ಹೋಗಿದ್ದಾರೆ. ಹಾಸಿಗೆ ಹಿಡಿದ ಮಗನ ಜೀವ ಉಳಿಸಲು ಕೈಲಾದ ಸಹಕಾರ ಮಾಡುವಂತೆ ಬೊಗಸೆ ಒಡ್ಡಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ವೆಂಕಟಾಪುರದ ದುರ್ಗಾದಾಸ ಮತ್ತು ಪಲ್ಲವಿ ದಂಪತಿಯ ನಾಲ್ಕು ವರ್ಷದ ಮಗ ಸೂರ್ಯ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾನೆ. ಮಗನ ಅನಾರೊಗ್ಯದ ಬಗ್ಗೆ ಹಲವು ವೈದ್ಯರ ಬಳಿ‌ ತೋರಿಸಿದಾಗ ಕೊನೆಗೆ ಕ್ಯಾನ್ಸರ್ ಎಂದು ಉತ್ತರ ಬಂದಿದ್ದು, ಆಡಿ ಬೆಳೆಯಬೇಕಾದ ಮಗನಿಗೆ ಇಂತಹ ಸ್ಥಿತಿ ಕಂಡು ತಂದೆ-ತಾಯಿ ಆಘಾತಕ್ಕೊಳಗಾಗಿದ್ದಾರೆ.

ಮಗನನ್ನು ಉಳಿಸಿಕೊಳ್ಳಲೇಬೇಕು ಎಂದು ದೂರದೂರಿಂದ ಬಂದಿರುವ ಈ ಕುಟುಂಬ ಇದೀಗ ಬೆಂಗಳೂರಿನ BCG ಆಸ್ಪತ್ರೆಯಲ್ಲಿ ತಮ್ಮ ಮಗುವನ್ನು ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ತಗಲುವ ಖರ್ಚಿನ ಪ್ರತಿಯನ್ನು ಆಸ್ಪತ್ರೆ ಸಿಬ್ಬಂದಿ ತಂದೆ-ತಾಯಿಗೆ ನೀಡಿದ್ದು ಬರೋಬ್ಬರಿ 15 ರಿಂದ 20 ಲಕ್ಷ ರೂ. ಆಗಬಹುದು ಎಂದು ಅಂದಾಜಿಸಿದ್ದಾರೆ. ಆದರೆ, ಬಡ ಕುಟುಂಬವಾದ ಸೂರ್ಯನ ತಂದೆ-ತಾಯಿ ಈಗಾಗಲೇ ಚಿಕಿತ್ಸೆಗಾಗಿ ಸಾಕಷ್ಟು ಖರ್ಚು ಮಾಡಿದ್ದು, ಇಷ್ಟೊಂದು ಹಣ ಹೊಂದಿಸಲು ಅಸಹಾಯಕರಾಗಿದ್ದಾರೆ.

ಇದರಿಂದ ಸಮಾಜದಲ್ಲಿರುವ ಸಹೃದಯಿಗಳು ಕೈಲಾದ ಸಹಾಯ ಮಾಡುವ ಮೂಲಕ ಮಗನಿಗೆ ಚಿಕಿತ್ಸೆ ಕೊಡಿಸಲು ನೇರವಾಗುವಂತೆ ಮನವಿ ಮಾಡಿದ್ದಾರೆ.

ಸಹಾಯ ಮಾಡುವವರು ಈ ಖಾತೆಗೆ ಹಣ ಕಳಿಸಬಹುದು:

DURGADAS MANJU MOGER
ACCOUNT NUMBER :03312200039581
IFSC : SYNB0000331
BRANCH-SHIRALI
TALUK:BHATKAL
DIST: UTTARAKANNADA

ABOUT THE AUTHOR

...view details