ಉಡುಪಿ:ಹೆಜಮಾಡಿ ಅಳಿವೆ ಸಮೀಪ ಸ್ನಾನಕ್ಕೆ ಇಳಿದ ಬಾಲಕರಿಬ್ಬರು ನೀರು ಪಾಲಾದ ಘಟನೆ ಇಂದು ಸಂಜೆ ನಡೆದಿದೆ. ಮೋಸಿನ್ (16) ಹಾಗೂ ಮೊಹಮ್ಮದ್ ರಾಯಿಸ್ (16) ಮ್ರತಪಟ್ಟ ಬಾಲಕರಾಗಿದ್ದು, ಮೊಹಮ್ಮದ್ ನಬೀಲ್ (16) ಎಂಬಾತನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಮೂವರು ಬಾಲಕರು ಹೆಜಮಾಡಿ ಎನ್.ಎಸ್. ರಸ್ತೆ ನಿವಾಸಿಗಳಾಗಿದ್ದು ಹೆಜಮಾಡಿಯ ಕಾಮಿನಿ ಹೊಳೆ ಹಾಗೂ ಸಮುದ್ರ ಸೇರುವ ಮುಟ್ಟಳಿವೆ ಬಳಿ ಸ್ನಾನ ಮಾಡಲು ತೆರಳಿದ್ದರು. ದಡದಲ್ಲಿ ಸ್ನಾನ ಮಾಡಲೆಂದು ಈಜಲು ನೀರಿಗೆ ಇಳಿದ ವೇಳೆ ಈ ದುರ್ಘಟನೆ ಸಂಭವಿಸಿದೆ. ಅಳಿವೆಯಲ್ಲಿ 12-15 ಅಡಿ ಆಳ ನೀರಿದ್ದು ಇದನ್ನು ಗಮನಿಸದೇ ಬಾಲಕರು ನೀರಿಗಳಿದಿದ್ದಾರೆ ಎನ್ನ ಲಾಗಿದೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.