ಕರ್ನಾಟಕ

karnataka

ETV Bharat / state

ಮಳೆರಾಯನ ಆರ್ಭಟಕ್ಕೆ ಸೋಲಾರ್ ಸಿಸ್ಟಮ್ ನಜ್ಜುಗುಜ್ಜು: ಅಪಾರ ನಷ್ಟ

ನಗರದಲ್ಲಿ ಭಾರಿ ಮಳೆ ಸುರಿದ ಪರಿಣಾಮ ಅಪಾರ ನಷ್ಟ ಸಂಭವಿಸಿದೆ, ಜನ ಜೀವನ ಅಸ್ತವ್ಯಸ್ತ

ನಗರದಲ್ಲಿ ಮಳೆ ಅವಾಂತರ

By

Published : Apr 20, 2019, 8:09 PM IST

ತುಮಕೂರು: ನಗರದಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಪೊಲೀಸ್ ಕ್ವಾಟ್ರಸ್​​ನಲ್ಲಿ ಅಳವಡಿಸಲಾಗಿದ್ದ ಸೋಲಾರ್ ಸಿಸ್ಟಮ್ ಬಿಡಿ ಭಾಗಗಳು ಹಾರಿ ಹೋಗಿ ಅಪಾರ ನಷ್ಟ ಸಂಭವಿಸಿದೆ.

ನಗರದಲ್ಲಿ ಮಳೆ ಅವಾಂತರ

ಜಯನಗರ ಬಡಾವಣೆಯಲ್ಲಿರುವ ಪೊಲೀಸ್ ಕ್ವಾಟ್ರಸ್​​ನಲ್ಲಿ ಘಟನೆ ಸಂಭವಿಸಿದ್ದು, ಮನೆಗಳ ಮೇಲ್ಭಾಗ ಇದ್ದ 11 ಸೋಲಾರ್ ಪ್ಲೆಟ್​ಗಳು ಬಿಲ್ಡಿಂಗ್ ಮೇಲಿಂದ ಬಿದ್ದು ನಜ್ಜುಗುಜ್ಜಾಗಿವೆ.

ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಸುರಿದ ಭಾರಿ ಮಳೆಗೆ ನಗರದ ವಿವಿಧೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿತ್ತು.

ABOUT THE AUTHOR

...view details