ಕರ್ನಾಟಕ

karnataka

By

Published : Jun 3, 2022, 4:38 PM IST

ETV Bharat / state

ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಗೆ ಅವಕಾಶ ಸಿಗದಂತೆ ಖರ್ಗೆ ಕೆಲಸ ಮಾಡುತ್ತಿದ್ದಾರೆ: ಹೆಚ್. ಡಿ ದೇವೇಗೌಡ

ಕುವೆಂಪು ಅವರು ರಾಷ್ಟ್ರಮಟ್ಟದ ವ್ಯಕ್ತಿ ಎಂಬುದನ್ನು ಗಮನಿಸಬೇಕಿದೆ. ಅವರಿಗೆ ಅವಮಾನವಾಗುವಂತಹ ವಿಷಯ ಕೇಳಿದಾಗ ನನ್ನ ಮನಸ್ಸಿಗೆ ನೋವು ತರುತ್ತಿದೆ ಎಂದು ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ ಅವರು ಹೇಳಿದರು.

ಹೆಚ್. ಡಿ ದೇವೇಗೌಡ
ಹೆಚ್. ಡಿ ದೇವೇಗೌಡ

ತುಮಕೂರು:ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಗೆ ಅವಕಾಶ ನೀಡಬಾರದು ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ ತಿಳಿಸಿದ್ದಾರೆ.

ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ ಅವರು ಮಾತನಾಡಿದರು

ತುಮಕೂರು ಜಿಲ್ಲೆ ಬಳಗೆರೆ ಗ್ರಾಮದಲ್ಲಿ ಮಾತನಾಡಿದ ಅವರು, ನಾವು ಎರಡನೇ ಅಭ್ಯರ್ಥಿಯಾಗಿ ಬಿಜೆಪಿಗೆ ಅವಕಾಶ ಕೊಡಬಾರದು ಎಂದು ಖರ್ಗೆ ವರ್ಕ್ ಮಾಡುತ್ತಿದ್ದಾರೆ ಎಂದರು.

ನನ್ನ ಮನಸ್ಸಿಗೆ ನೋವು ತರುತ್ತಿದೆ..ಸಾಹಿತ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಬೆಳೆದವರು ಕುವೆಂಪು ಆಗಿದ್ದಾರೆ. ಈ ಹಿಂದೆಯೇ ಒಂದು ಸಮುದಾಯ ಹೀಗೆ ನಡೆದುಕೊಂಡಿದೆ ಎಂಬುದು ಸಾಬೀತಾಗಿದೆ. ಕುವೆಂಪು ಅವರು ರಾಷ್ಟ್ರಮಟ್ಟದ ವ್ಯಕ್ತಿ ಎಂಬುದನ್ನು ಗಮನಿಸಬೇಕಿದೆ. ಅವರಿಗೆ ಅವಮಾನವಾಗುವಂತಹ ವಿಷಯ ಕೇಳಿದಾಗ ನನ್ನ ಮನಸ್ಸಿಗೆ ನೋವು ತರುತ್ತಿದೆ ಎಂದರು.

ಓದಿ:ಸೋರುತ್ತಿರುವ ಶಾಲೆ : ಮಳೆಯಲ್ಲಿ ಒದ್ದೆಯಾದ ಪುಸ್ತಕಗಳನ್ನು ಬಿಸಿಲಲ್ಲಿ ಒಣಗಿಸುತ್ತಿರುವ ಪುಟ್ಟ ಮಕ್ಕಳು

For All Latest Updates

TAGGED:

ABOUT THE AUTHOR

...view details