ಕರ್ನಾಟಕ

karnataka

ETV Bharat / state

ಚಂಡಮಾರುತ ಎಫೆಕ್ಟ್: ಸಂಕಷ್ಟದಲ್ಲಿ ರಾಜ್ಯದ ಪ್ರವಾಸಿಗರು

ಕೊಲ್ಕತ್ತಾ ವಿಮಾನ ನಿಲ್ದಾಣದಿಂದ ವಿಡಿಯೋ ಮೂಲಕ ಬೆಂಗಳೂರಿಗೆ ಹೋಗಲು ವ್ಯವಸ್ಥೆ ಮಾಡುವಂತೆ ರಾಜ್ಯದ ಪ್ರವಾಸಿಗರು ಮೊರೆಯಿಡುತ್ತಿದ್ದಾರೆ. ಜೆಟ್ ಏರ್​ವೇಸ್​ನಲ್ಲಿ ತೆರಳಿದ್ದ ಇವರಿಗೆ ಏರ್​ವೇಸ್​ ಪರ್ಯಾಯ ವ್ಯವಸ್ಥೆ ಮಾಡಿಲ್ಲ ಎಂದು ದೂರಿದ್ದಾರೆ.

By

Published : May 5, 2019, 2:05 PM IST

ರಾಜ್ಯದ ಪ್ರವಾಸಿಗರು

ತುಮಕೂರು:ಪ್ರವಾಸಕ್ಕೆಂದುತೆರಳಿದ ರಾಜ್ಯದ ಪ್ರವಾಸಿಗರು ಫಣಿ ಚಂಡಮಾರುತದ ಹಿನ್ನೆಲೆಯಲ್ಲಿ ಕೊಲ್ಕತ್ತಾದಲ್ಲಿ ಸಂಕಷ್ಟಕ್ಕೀಡಾಗಿದ್ದಾರೆ.

ಮೂಡಿಗೆರೆ, ಚನ್ನರಾಪಟ್ಟಣ, ದಾವಣಗೆರೆ ಹಾಗೂ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಪ್ರವಾಸಿಗರು ಅಂಡಮಾನ್​ನಿಂದ ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಆದ್ರೆ, ಕೋಲ್ಕತ್ತಾದಿಂದ ಬೆಂಗಳೂರಿಗೆ ಬರಲು ಸಾಧ್ಯವಾಗದೇ ವಿಮಾನ ನಿಲ್ದಾಣದಲ್ಲೇ ಉಳಿದ ಅವರು ಪರ್ಯಾಯ ವ್ಯವಸ್ಥೆಗಾಗಿ ಕೇಳಿಕೊಂಡಿದ್ದಾರೆ.

ಸಂಕಷ್ಟದಲ್ಲಿ ಸಿಲುಕಿರುವ ರಾಜ್ಯದ ಪ್ರವಾಸಿಗರು

ವಿಮಾನ ನಿಲ್ದಾಣದಿಂದ ವಿಡಿಯೋ ಮೂಲಕ, ಬೆಂಗಳೂರಿಗೆ ಹೋಗಲು ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ. ಜೆಟ್ ಏರ್​ವೇಸ್​ನಲ್ಲಿ ತೆರಳಿದ್ದ ಇವರಿಗೆ ಘಟನೆಯ ನಂತರ ಏರ್​ವೇಸ್‌ ಪರ್ಯಾಯ ವ್ಯವಸ್ಥೆ ಮಾಡಿಲ್ಲ ಎಂದು ಇದೇ ವೇಳೆ ಅವರು ದೂರಿದರು.

ABOUT THE AUTHOR

...view details