ಕರ್ನಾಟಕ

karnataka

ETV Bharat / state

ಗ್ರಾಪಂ ಚುನಾವಣೆ: ಗಣೇಶ ಮೂರ್ತಿ ಎದುರು ಕ್ಯೂನಲ್ಲಿ ನಿಂತು ನಾಮಪತ್ರಗಳಿಗೆ ಪೂಜೆ

ಗೂಳೂರು ಗ್ರಾಮ ಪಂಚಾಯಿತಿ ಸೇರಿದಂತೆ ಸುತ್ತಮುತ್ತಲ ಗ್ರಾಪಂಗಳಿಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ನಾಮಪತ್ರಗಳನ್ನು ಗಣಪತಿ ಮೂರ್ತಿಯ ಮುಂದಿರಿಸಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

By

Published : Dec 11, 2020, 3:59 PM IST

Updated : Dec 11, 2020, 4:10 PM IST

ಗಣೇಶನ ಎದುರು ಕ್ಯೂನಲ್ಲಿ ನಿಂತು ನಾಮಪತ್ರಗಳಿಗೆ ಪೂಜೆ ಸಲ್ಲಿಸಿದ ಅಭ್ಯರ್ಥಿಗಳು
ಗಣೇಶನ ಎದುರು ಕ್ಯೂನಲ್ಲಿ ನಿಂತು ನಾಮಪತ್ರಗಳಿಗೆ ಪೂಜೆ ಸಲ್ಲಿಸಿದ ಅಭ್ಯರ್ಥಿಗಳು

ತುಮಕೂರು: ಜಿಲ್ಲೆಯಲ್ಲಿ ನಡೆಯಲಿರುವ ಮೊದಲ ಹಂತದ ಗ್ರಾಮ ಪಂಚಾಯತ್​ ಚುನಾವಣೆಗೆ ಇಂದು ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದ್ದರಿಂದ ಪ್ರಸಿದ್ಧ ತುಮಕೂರು ತಾಲೂಕಿನ ಗೂಳೂರು ಗಣಪತಿ ದೇಗುಲದಲ್ಲಿ ನಾಮಪತ್ರ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಕ್ಯೂನಲ್ಲಿ ನಿಂತು ಪೂಜೆ ಮಾಡಿಸಿದರು.

ಗಣೇಶನ ಎದುರು ಕ್ಯೂನಲ್ಲಿ ನಿಂತು ನಾಮಪತ್ರಗಳಿಗೆ ಪೂಜೆ ಸಲ್ಲಿಸಿದ ಅಭ್ಯರ್ಥಿಗಳು

ವಿಶೇಷವಾಗಿ ಗೂಳೂರು ಗ್ರಾಮದಲ್ಲಿ ಪ್ರತಿ ವರ್ಷ ಒಂದು ತಿಂಗಳ ಕಾಲ ನಿರಂತರವಾಗಿ ಬೃಹತ್ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಈ ಬಾರಿ ಗ್ರಾಮ ಪಂಚಾಯತ್​ ಚುನಾವಣೆ ಹಿನ್ನೆಲೆ ಗೂಳೂರು ಗ್ರಾಮ ಪಂಚಾಯತ್​ ಸೇರಿದಂತೆ ಸುತ್ತಮುತ್ತಲ ಗ್ರಾಪಂಗಳಿಗೆ ಸ್ಪರ್ಧಿಸಬಯಸುವ ಅಭ್ಯರ್ಥಿಗಳು ನಾಮಪತ್ರಗಳನ್ನು ಗಣಪತಿ ಮೂರ್ತಿಯ ಮುಂದಿರಿಸಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

Last Updated : Dec 11, 2020, 4:10 PM IST

ABOUT THE AUTHOR

...view details