ಕರ್ನಾಟಕ

karnataka

By

Published : Jun 7, 2022, 8:28 PM IST

ETV Bharat / state

ತುಮಕೂರಿನ ದೇವಸ್ಥಾನದಲ್ಲಿ ಜಾರಿಗೆ ಬಂದ ಇ - ಹುಂಡಿ

ತುಮಕೂರಿನ ಭೋಗಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಇ - ಹುಂಡಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಫೋನ್ ಪೇ, ಯುಪಿಐ ಇತರೆ ಡಿಜಿಟಲ್ ಮೂಲಕ ದೇವರಿಗೆ ಕಾಣಿಕೆ ಹಣ ಪಾವತಿ ಮಾಡಬಹುದಾಗಿದೆ.

E-Hundi implemented in the Temple
ದೇವಸ್ಥಾನದಲ್ಲಿ ಜಾರಿಗೆ ಬಂದ ಇ -ಹುಂಡಿ

ತುಮಕೂರು:ಜಿಲ್ಲೆಯ ದೇವರಾಯನದುರ್ಗ ಪ್ರದೇಶದಲ್ಲಿರುವ ಭೋಗಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಭಕ್ತರು ಕಾಣಿಕೆ ಸಮರ್ಪಣೆ ಮಾಡಲು ಇ ಹುಂಡಿ ವ್ಯವಸ್ಥೆ ಮಾಡಲಾಗಿದ್ದು, ಸಂಪೂರ್ಣ ಡಿಜಿಟಲೀಕರಣವಾಗಿದೆ. ಕಾಣಿಕೆಯ ಹುಂಡಿಯ ಜೊತೆಗೆ ಇ - ಸ್ಕ್ಯಾನಿಂಗ್, ಸ್ವೈಪಿಂಗ್ ಸೇರಿ ಇತರ ಸೌಲಭ್ಯ ಲಭ್ಯವಿರಲಿದೆ. ಫೋನ್ ಪೇ, ಯುಪಿಐ ಇತರ ಡಿಜಿಟಲ್ ಮೂಲಕ ದೇವರಿಗೆ ಕಾಣಿಕೆ ಹಣ ಪಾವತಿ ಮಾಡ ಬಹುದಾಗಿದೆ.

ತುಮಕೂರಿನ ದೇವಸ್ಥಾನದಲ್ಲಿ ಜಾರಿಗೆ ಬಂದ ಇ - ಹುಂಡಿ

ಈ ಮೂಲಕ ದೇವಾಲಯಗಳ ಹುಂಡಿಗೆ ಚಿಲ್ಲರೆ ಹಾಕಲು ಭಕ್ತರ ಪರದಾಟಕ್ಕೆ ಬ್ರೇಕ್ ಹಾಕಲಾಗಿದೆ. ಸಾಮಾನ್ಯವಾಗಿ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಬರುವ ಭಕ್ತರು ದಾನ ನೀಡಲು ಸಹಾಯ ಆಗಲೆಂದು ದೇವರಾಯನದುರ್ಗದ ದೇವಸ್ಥಾನದಲ್ಲಿ ಈ ಡಿಜಿಟಲೀಕರಣ ವ್ಯವಸ್ಥೆ ಜಾರಿಗೆ ತರಲಾಗಿದೆ. ಅದರಲ್ಲೂ ದೇವರಾಯನದುರ್ಗದಲ್ಲಿ ಇ - ಕಾಣಿಕೆ ಹುಂಡಿ ಮೊದಲ ಬಾರಿ ಚಾಲ್ತಿಗೆ ಬಂದಿದೆ. ಆಧುನಿಕತೆಗೆ ತಕ್ಕಂತೆ ದೇವರಾಯನದುರ್ಗದ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದಲ್ಲೂ ಸಂಪೂರ್ಣ ಬದಲಾವಣೆ ತರಲಾಗಿದೆ.

ಇದನ್ನೂ ಓದಿ:ಹೆಸರಿನ ಮುಂದೆ ನಾಡೋಜ ಪದವಿ ಬಳಸದಂತೆ ಹಂಪಿ ವಿವಿ ನಿರ್ಧಾರ: ಸಾಧಕರಿಂದ ಆಕ್ರೋಶ

For All Latest Updates

ABOUT THE AUTHOR

...view details