ತುಮಕೂರು :ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ರಸ್ತೆ ಬದಿ ಹೋಗುತ್ತಿದ್ದ ನಾಗರಹಾವನ್ನು ಕೈಗೆ ಸುತ್ತಿಕೊಂಡು ಹುಚ್ಚಾಟ ಮೆರೆದಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ವೆಲ್ಡಿಂಗ್ ಕೆಲಸ ಮಾಡುತ್ತಿರುವಾ ಸಲೀಮ್ ಎಂಬಾತ ಹಾವು ಹಿಡಿದು ಕೈಗೆ ಸುತ್ತಿಕೊಂಡ ಸಂದರ್ಭದಲ್ಲಿ ಹಾವು ಎರಡು ಬಾರಿ ಕಚ್ಚಿದರೂ ಈತ ಅದನ್ನು ಬಿಡದೇ ಬಡಾವಣೆಯಲ್ಲಿ ಓಡಾಡಿದ್ದಾನೆ. ನಂತರ ಸಾರ್ವಜನಿಕರು ಹಾಗೂ ಸ್ಥಳದಲ್ಲಿದ್ದವರು ಹಾವು ಬಿಡುವಂತೆ ಎಷ್ಟೇ ಹೇಳಿದರೂ ಮಂಡಾಟ ತೋರಿದ್ದಾನೆ. ಹಾವು ಮತ್ತೊಮ್ಮೆ ಕಚ್ಚಲು ಯತ್ನಿಸುತ್ತಿದ್ದ ವೇಳೆ ಆತನ ಕೈಯಿಂದ ಜಾರಿ ಪೊದೆಯೊಳಗೆ ಪರಾರಿಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಉರಗ ತಜ್ಞ ದಿಲೀಪ್, ನಾಗರಹಾವನ್ನು ಸುರಕ್ಷಿತವಾಗಿ ಹಿಡಿದು ದೇವರಾಯನದುರ್ಗ ಅರಣ್ಯಕ್ಕೆ ಬಿಟ್ಟಿದ್ದಾರೆ.