ಕರ್ನಾಟಕ

karnataka

By

Published : Oct 2, 2020, 6:28 PM IST

ETV Bharat / state

ಶಿರಾದಲ್ಲಿ ಬಿಜೆಪಿಯ ಬಿರುಗಾಳಿ ಎದ್ದಿದೆ: ನಳಿನ್ ಕುಮಾರ್ ಕಟೀಲ್

ಶಿರಾ ತಾಲೂಕಿನ ಬಾಲೆನಹಳ್ಳಿಯಲ್ಲಿ ನಡೆದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭಾಗಿಯಾಗಿದ್ರು. ಈ ಸಭೆಯಲ್ಲಿ ಮಾತನಾಡಿದ ಅವರು, ಶಿರಾದಲ್ಲಿ ಬಿಜೆಪಿ ಬಿರುಗಾಳಿ ಎದ್ದಿದೆ. ಈ ಬಿರುಗಾಳಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನೆಲಕಚ್ಚುತ್ತವೆ ಎಂದಿದ್ದಾರೆ.

ನಳಿನ್ ಕುಮಾರ್ ಕಟೀಲ್
ನಳಿನ್ ಕುಮಾರ್ ಕಟೀಲ್

ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬಿರುಗಾಳಿ ಎದ್ದಿದೆ. ಈ ಬಿರುಗಾಳಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನೆಲಕಚ್ಚುತ್ತವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭವಿಷ್ಯ ನುಡಿದಿದ್ದಾರೆ.

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬಾಲೆನಹಳ್ಳಿಯಲ್ಲಿ ನಡೆದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೊದಲ ಬಾರಿಗೆ ಶಿರಾದಲ್ಲಿ ಬಿಜೆಪಿ ಅರಳಿಸುವ ಸಂಕಲ್ಪ ಸಭೆ ಇದಾಗಿದೆ ಎಂದಿದ್ದಾರೆ.

ಕಳೆದ ಆರು ವರ್ಷಗಳಲ್ಲಿ ರಾಜ್ಯವು ಮೂವರು ಮುಖ್ಯಮಂತ್ರಿಗಳನ್ನು ಕಂಡಿದೆ. ಅದರಲ್ಲಿ ಒಬ್ಬರು ಜನರ ಕಣ್ಣಲ್ಲಿ ಕಣ್ಣೀರು ಹಾಕಿಸಿದರು. ಇನ್ನೊಬ್ಬರು ಅಧಿಕಾರ ಸಿಕ್ಕಾಗ ಸಭೆಗಳಲ್ಲಿ ಕಣ್ಣೀರು ಹಾಕಿ ಅಧಿಕಾರ ಕಳೆದುಕೊಂಡಾಗ ಮನೆಗಳಲ್ಲಿ ಕಣ್ಣೀರು ಹಾಕಿದರು. ಜನರ ಕಣ್ಣೀರು ಒರೆಸಿದ ಸಿಎಂ ಆಗಿ ಯಡಿಯೂರಪ್ಪ ಬೆಳಕಿಗೆ ಬಂದಿದ್ದಾರೆ ಎಂದರು.

ಬಿರುಗಾಳಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನೆಲಕಚ್ಚುತ್ತವೆ-ನಳಿನ್ ಕುಮಾರ್ ಕಟೀಲ್

ಸಿದ್ದರಾಮಯ್ಯ ಸರ್ಕಾರದಲ್ಲಿ ಅಧಿಕಾರಿಗಳ ಆತ್ಮಹತ್ಯೆ ನಡೆಯಿತು. 24 ಹಿಂದೂ ಕಾರ್ಯಕರ್ತರ ಹತ್ಯೆ ಮಾಡಲಾಯಿತು. ಕರುಣೆ ಇಲ್ಲದ ಸಿಎಂ ಅಂದರೆ ಅದು ಸಿದ್ದರಾಮಯ್ಯ. ಹೆಚ್. ಡಿ. ಕುಮಾರಸ್ವಾಮಿ ಒಂದು ವರ್ಷ ತಾಜ್ ಹೋಟೆಲ್​ನಿಂದ ಹೊರಗೆ ಬರಲೇ ಇಲ್ಲ ಎಂದು ವ್ಯಂಗ್ಯವಾಡಿದರು.

ಮೊದಲು ಭಾರತವನ್ನು ಅಮೆರಿಕ ಮಾಡುತ್ತೇವೆ ಅಂತ ಹೇಳುತ್ತಿದ್ದರು. ಈಗ ಅಮೆರಿಕದಲ್ಲಿ ಹೇಳುತ್ತಿದ್ದಾರೆ ಭಾರತದ ರೀತಿ ನಾವು ಮಾಡುತ್ತೇವೆ ಎಂದು. ಅಮೆರಿಕ ಚುನಾವಣೆ ಕೇಂದ್ರ ಬಿಂದು ನರೇಂದ್ರ ಮೋದಿ ಆಗಿದ್ದಾರೆ. ಅಮೆರಿಕವನ್ನು ಭಾರತವನ್ನಾಗಿ ಮಾಡುತ್ತೇವೆ, ಒಂದು ಅವಕಾಶ ಕೊಡಿ ಎನ್ನುತ್ತಿದ್ದಾರೆ ಅಲ್ಲಿನ ರಾಜಕೀಯ ಪಕ್ಷಗಳು ಎಂದು ಹೇಳಿದರು.

ABOUT THE AUTHOR

...view details