ಶಿವಮೊಗ್ಗ: ನವೆಂಬರ್ 13 ರಂದು ಭದ್ರಾವತಿಯಲ್ಲಿ ಹಳೇ ದ್ವೇಷಕ್ಕೆ ಯುವಕರ ನಡುವೆ ನಡೆದ ಗಲಾಟೆ ಪ್ರಕರಣ ಸಂಬಂಧ ಪೊಲೀಸರು 6 ಜನರನ್ನು ಬಂಧಿಸಿದ್ದಾರೆ. ಇಲ್ಲಿನ ತರಿಕೆರೆ ರಸ್ತೆಯ ಗಾಂಧಿ ವೃತ್ತದಲ್ಲಿ ನಡೆದು ಕೊಂಡು ಹೋಗುತ್ತಿದ್ದ ಗೌತಮ್ ಹಾಗೂ ಹರೀಶ್ ಎಂಬುವರ ಮೇಲೆ ಜಹೀರ್ ಎಂಬಾತ ಹಲ್ಲೆ ಮಾಡಿ ಚಾಕುವಿನಲ್ಲಿ ಇರಿದಿದ್ದ.
ಭದ್ರಾವತಿ ಯುವಕರ ನಡುವೆ ಗಲಾಟೆ: 6 ಜನರ ಬಂಧನ
ಭದ್ರಾವತಿಯಲ್ಲಿ ನವೆಂಬರ್ 13ರಂದು ಎರಡು ಕೋಮಿನ ಯುವಕರ ಮಧ್ಯೆ ಗಲಾಟೆ ನಡೆದು, ನಾಲ್ವರು ಗಾಯಗೊಂಡಿದ್ದರು. ಈ ಪ್ರಕರಣ ಸಂಬಂಧ 6 ಜನರ ಬಂಧಿಸಲಾಗಿದೆ.
ಭದ್ರಾವತಿ ಯುವಕರ ನಡುವೆ ಗಲಾಟೆ
ಚಾಕು ಇರಿತ ಪ್ರಕರಣದ ಕುರಿತು ಹೊಸಮನೆ ಹಾಗೂ ಹಳೇ ನಗರ ಪೊಲೀಸ್ ಠಾಣೆಯಲ್ಲಿ ಒಟ್ಟು ಮೂರು ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ನೆಹರು ನಗರದ ನಿವಾಸಿಗಳಾದ ಹರೀಶ್(22), ಗೌತಮ್ ಅಲಿಯಾಸ್ ಅಪ್ಪು(22), ಸಿದ್ದಪುರ ಹೂಸೂರು ಗ್ರಾಮ್ ಜಹೀರ್(27), ಭದ್ರಾವತಿಯ ಎಕಿನ್ಸಾ ಕಾಲೋನಿಯ ಅಸ್ಲಾಂ ಅಲಿಯಾಸ್ ಅಸ್ಲಿ(29), ಹೊಸಮನೆ ಬಡಾವಣೆಯ ಮಂಜುನಾಥ್(24) ಹಾಗೂ ಅಶೋಕ್(22) ರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:ಭದ್ರಾವತಿಯಲ್ಲಿ ಯುವಕರ ನಡುವೆ ಗಲಾಟೆ: ಮೂವರಿಗೆ ಚಾಕು ಇರಿತ, ಕಲ್ಲು ತೂರಾಟ