ಕರ್ನಾಟಕ

karnataka

By

Published : Mar 29, 2022, 11:42 AM IST

ETV Bharat / state

ಸಾಗರದ ಗಣಪತಿ ಕೆರೆಯಲ್ಲಿ ವೈದ್ಯಾಧಿಕಾರಿ ಶರ್ಮ ಶವ ಪತ್ತೆ: ಕೊಲೆಯೋ, ಆತ್ಮಹತ್ಯೆಯೋ ನಿಗೂಢ

ಶಿವಮೊಗ್ಗೆ ಜಿಲ್ಲೆಯ ಸಾಗರ ತಾಲೂಕು ವೈದ್ಯಾಧಿಕಾರಿ ಡಾ.ಶರ್ಮ ಅವರ ಮೃತದೇಹ ಗಣಪತಿ ಕೆರೆಯಲ್ಲಿ ಪತ್ತೆಯಾಗಿದೆ.

Sagar Taluk Medical Officer Sharma dead body found in Ganpati lake
ಸಾಗರದ ಗಣಪತಿ ಕೆರೆಯಲ್ಲಿ ವೈದ್ಯಾಧಿಕಾರಿ ಶರ್ಮ ಶವ ಪತ್ತೆ

ಶಿವಮೊಗ್ಗ:ಜಿಲ್ಲೆಯ ಸಾಗರ ತಾಲೂಕಿನ ವೈದ್ಯಾಧಿಕಾರಿ ಡಾ.ಶರ್ಮ ಅವರ ಮೃತದೇಹ ಗಣಪತಿ ಕೆರೆಯಲ್ಲಿ ಪತ್ತೆಯಾಗಿದ್ದು, ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಶಂಕೆ ವ್ಯಕ್ತವಾಗಿದೆ.

ವೈದ್ಯೆ ಡಾ.ಶರ್ಮರವರು ಸಾಗರದಲ್ಲಿ ತಾಲೂಕು ಸಹಾಯಕ ವೈದ್ಯಾಧಿಕಾರಿಯಾಗಿ ಹಾಗೂ ರಾಷ್ಟ್ರೀಯ ಲಸಿಕಾ ಸುರಕ್ಷತಾ ಅಭಿಯಾನದ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೋವಿಡ್ ಎರಡು ಮತ್ತು ಮೂರನೇ ಅಲೆಯಲ್ಲಿ ಹಗಲು ರಾತ್ರಿ ಎನ್ನದೇ ಕೆಲಸ ಮಾಡಿದ್ದರು. ದಕ್ಷ, ಪ್ರಮಾಣಿಕವಾಗಿ ಕೆಲಸ ನಿರ್ವಹಿಸುತ್ತಿದ್ದರು.‌ ಇಂತಹ ಉತ್ತಮ ವೈದ್ಯಾಧಿಕಾರಿ ಆತ್ಮಹತ್ಯೆ ಮಾಡಿಕೊಂಡರಾ ಅಥವಾ ಕೊಲೆ ಮಾಡಲಾಗಿದೆಯೇ ಎಂಬ ಶಂಕೆ ಸ್ಥಳೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಮೃತ ಶರ್ಮ ಅವರ ಪತಿ ಸಾಗರ ತಾಲೂಕಿನ ಭೀಮನಕೋಣೆ ಗ್ರಾಮ ಪಂಚಾಯಿತಿ ಪಿಡಿಒ ಆಗಿ ಕರ್ತವ್ಯ ‌ನಿರ್ವಹಿಸುತ್ತಿದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಘಟನೆ ಬಗ್ಗೆ ಮೃತ ಶರ್ಮ ಅವರ ತಂದೆ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ಸೋಷಿಯಲ್​​​ ಮೀಡಿಯಾದಲ್ಲಿ ಸದ್ದು ಮಾಡಿದ್ದ 25- 45ರ ವಧು - ವರರ ವಿವಾಹ: ಶಂಕರಪ್ಪ ಆತ್ಮಹತ್ಯೆ..

For All Latest Updates

TAGGED:

ABOUT THE AUTHOR

...view details