ಕರ್ನಾಟಕ

karnataka

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿ ‌ಹೆಚ್.ಟಿ.ಬಳಿಗಾರ್ ನೇಮಕ

By

Published : Dec 15, 2022, 5:17 PM IST

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರನ್ನಾಗಿ ಶಿಕಾರಿಪುರದ ಹೆಚ್​ ಟಿ ಬಳಿಗಾರ್ ಅವರನ್ನು​ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ht-baligar-as-chairman-of-state-warehousing-corporation
ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿ ‌ಹೆಚ್.ಟಿ.ಬಳಿಗಾರ್ ನೇಮಕ

ಶಿವಮೊಗ್ಗ: ಹಿರೆಕೇರೂರಿನ ಬಣಕಾರ್ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನದ ಜೊತೆಗೆ ಬಿಜೆಪಿಗೂ ರಾಜೀನಾಮೆ ನೀಡಿದ ಕಾರಣ ತೆರವಾಗಿದ್ದ ಸ್ಥಾನಕ್ಕೆ ಹೆಚ್.ಟಿ.ಬಳಿಗಾರ್​ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ.

ಶಿಕಾರಿಪುರದಿಂದ ಕಳೆದ ಎರಡು ಬಾರಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದರು. ಮುಂದಿನ ಚುನಾವಣೆಯಲ್ಲಿ ಬಿ ವೈ ವಿಜಯೇಂದ್ರ ಸ್ಪರ್ಧೆ ಮಾಡುವ ಕಾರಣ ಬಳಿಗಾರ್ ​ಅವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡರೆ ಅನುಕೂಲವಾಗುತ್ತದೆ ಎಂದು ಯಡಿಯೂರಪ್ಪ ಯೋಚನೆ ಮಾಡಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿ ‌ಹೆಚ್.ಟಿ.ಬಳಿಗಾರ್ ನೇಮಕ

ಕೊಟ್ಟ ಮಾತು ಉಳಿಸಿಕೊಂಡ ಯಡಿಯೂರಪ್ಪ: ಬಳಿಗಾರ್ ಒಬ್ಬ ಸ್ವಯಂ ನಿವೃತ್ತ ಅಧಿಕಾರಿ ಮತ್ತು ಉತ್ತಮ ಆಲೋಚನೆಯುಳ್ಳವರಾಗಿದ್ದು ಬಿಜೆಪಿಯಲ್ಲಿದ್ದರೆ, ಪಕ್ಷಕ್ಕೆ ಅನುಕೂಲವಾಗಲಿದೆ ಎಂಬ ಚಿಂತನೆಯಿಂದ ಬಳಿಗಾರ‌ ಅವರನ್ನು ಬಿಜೆಪಿಗೆ ಬರಮಾಡಿಕೊಳ್ಳಲಾಯಿತು.

ಬಳಿಗಾರ್ ಅವರಿಗೆ ಪಕ್ಷದಲ್ಲಿ ಉತ್ತಮ ಸ್ಥಾನಮಾನ ನೀಡುವ ಭರವಸೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಈಗ ಸರ್ಕಾರದ ಮೂಲಕ ಉಗ್ರಾಣ ‌ನಿಗಮದ ಅಧ್ಯಕ್ಷ ಗಾದಿಯನ್ನು ಮಂಜೂರು ಮಾಡಿಸಿದ್ದಾರೆ.

ಇದನ್ನೂ ಓದಿ:ಆಮದು ಅಡಿಕೆಗೆ ಹೆಚ್ಚು ಸುಂಕ ವಿಧಿಸಿ, ಎಲೆಚುಕ್ಕೆ ರೋಗಕ್ಕೆ ಔಷಧಿ ಪರಿಚಯಿಸಿ: ಬಿ ವೈ ರಾಘವೇಂದ್ರ

ABOUT THE AUTHOR

...view details