ಕರ್ನಾಟಕ

karnataka

By

Published : Apr 7, 2020, 7:08 PM IST

ETV Bharat / state

ಕೊರೊನಾ ವಿರುದ್ಧ ಶ್ರಮಿಸುತ್ತಿರುವ ಪೌರಕಾರ್ಮಿಕರಿಗೆ ಆಹಾರ ಧಾನ್ಯ ವಿತರಣೆ

ಪಾಲಿಕೆಯಲ್ಲಿ ಮೇಯರ್ ಸುವರ್ಣ ಶಂಕರ್ ಪಾಲಿಕೆಯ ಪೌರಕಾರ್ಮಿಕರಿಗೆ ಆಹಾರದ ಕಿಟ್​ಗಳನ್ನು ವಿತರಣೆ ಮಾಡಿದರು.

ಕೊರೊನಾ ವಿರುದ್ಧ ಶ್ರಮಿಸುತ್ತಿರುವರಿಗೆ ಆಹಾರ ಧಾನ್ಯ ವಿತರಣೆ
ಕೊರೊನಾ ವಿರುದ್ಧ ಶ್ರಮಿಸುತ್ತಿರುವರಿಗೆ ಆಹಾರ ಧಾನ್ಯ ವಿತರಣೆ

ಶಿವಮೊಗ್ಗ: ಕೊರೊನಾ ವಿರುದ್ಧ ಶ್ರಮಿಸುತ್ತಿರುವ ಪೌರಕಾರ್ಮಿಕರು, ಚಾಲಕರು ಸೇರಿದಂತೆ ಪಾಲಿಕೆಯ ಸಿಬ್ಬಂದಿಗೆ ಮಹಾನಗರ ಪಾಲಿಕೆ ವತಿಯಿಂದ ಅಹಾರದ ಕಿಟ್​ಗಳನ್ನು ವಿತರಣೆ ಮಾಡಲಾಯಿತು.

ಪಾಲಿಕೆಯಲ್ಲಿ ಮೇಯರ್ ಸುವರ್ಣ ಶಂಕರ್ ಪಾಲಿಕೆಯ ಪೌರಕಾರ್ಮಿಕರಿಗೆ ಆಹಾರದ ಕಿಟ್​ಗಳನ್ನು ವಿತರಣೆ ಮಾಡಿದರು. 5 ಕೆಜಿ ಅಕ್ಕಿ, 1 ಕೆಜಿ ಬೇಳೆ, 1 ಲಿಟರ್ ಅಡುಗೆ ಎಣ್ಣೆ, ಸೋಪು ಸೇರಿದಂತೆ ಸಾಂಬರ್ ಪುಡಿ‌‌ ಸೇರಿ ಒಟ್ಟು 15 ವಸ್ತುಗಳಿರುವ ಕಿಟ್ ವಿತರಣೆ ಮಾಡಲಾಯಿತು.

ಈ ವೇಳೆ ಪಾಲಿಕೆಯ ಉಪ ಮೇಯರ್ ಸುರೇಖಾ ಮುರುಳಿಧರ್, ಆಯುಕ್ತ ಚಿದಾನಂದ ವಾಟರೆ, ವಿರೋಧ ಪಕ್ಷದ ನಾಯಕ ಯೋಗೀಶ್ ಸೇರಿದಂತೆ ಇತರರು ಹಾಜರಿದ್ದರು.

ABOUT THE AUTHOR

...view details