ಕರ್ನಾಟಕ

karnataka

ಭದ್ರಾವತಿಗೆ ಡಿಸಿ ಭೇಟಿ: ತಹಶೀಲ್ದಾರ್​, ಪೊಲೀಸ್​​​ ಪೇದೆಗೆ ತರಾಟೆ

ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಭದ್ರಾವತಿಗೆ ಭೇಟಿ ನೀಡಿ, ಲಾಕ್​ಡೌನ್​ ನಿಯಮಗಳನ್ನು ಪರಿಶೀಲಿಸಿದರು.

By

Published : Apr 16, 2020, 10:05 PM IST

Published : Apr 16, 2020, 10:05 PM IST

DC visit to Bhadravati today
ಭದ್ರಾವತಿಗೆ ಡಿಸಿ ಭೇಟಿ

ಶಿವಮೊಗ್ಗ: ಕೊರೊನಾ ಲಾಕ್​ಡೌನ್​ನಿಂದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಇಂದು ಭದ್ರಾವತಿಗೆ ದಿಢೀರ್​ ಭೇಟಿ ನೀಡಿ ಪರಿಶೀಲಿಸಿದರು.

ಭದ್ರಾವತಿಗೆ ಡಿಸಿ ಭೇಟಿ

ಇದೇ ವೇಳೆ ಬೈಕ್ ಸವಾರನೊಬ್ಬ ತನ್ನ ಕುಟುಂಬದ ಜೊತೆ ಅನಗತ್ಯವಾಗಿ ಸಂಚರಿಸಿದ್ದು, ಪೊಲೀಸ್ ಪೇದೆ ಸಾರ್ವಜನಿಕರ ಜೊತೆ ಸೇರಿ ಮೀನು ಖರೀದಿ ಮಾಡುತ್ತಿದ್ದ ದೃಶ್ಯ ಕಂಡು ಬಂತು. ಇದರಿಂದ ಗರಂ ಆದ ಜಿಲ್ಲಾಧಿಕಾರಿ ಶಿವಕುಮಾರ್ ಎಚ್ಚರಿಕೆ ನೀಡಿದರು.

ಜನರಿಗೆ ಬುದ್ಧಿ ಹೇಳಬೇಕಾದ ಪೊಲೀಸರು ಈ ರೀತಿ ವರ್ತಿಸಿದರೆ ಹೇಗೆ ಎಂದು ಪ್ರಶ್ನಿಸಿದರು. ಭದ್ರಾವತಿಯ ಅಂಬೇಡ್ಕರ್ ವೃತ್ತದ ಬಳಿ ತಹಶೀಲ್ದಾರ್, ನಗರಸಭೆ ಆಯುಕ್ತ ಹಾಗೂ ಇತರೆ ಅಧಿಕಾರಿಗಳಿಗೆ ನಗರದಲ್ಲಿ ಜನ ಸಂಚಾರ ನಡೆಯುತ್ತಿರುವ ಬಗ್ಗೆ ತೀವ್ರ ತರಾಟೆಗೆ ತೆಗೆದುಕೊಂಡರು.

ABOUT THE AUTHOR

...view details