ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕನ್ನು ಕೇಂದ್ರ ಸರ್ಕಾರ ಬ್ರಾಂಡ್ ಬ್ಯಾಂಡ್ ಸೇವೆ ಒದಗಿಸುವ ನೀಡುವ ಪ್ರಾಯೋಗಿಕ ಕಾರ್ಯಕ್ಕೆ ಆಯ್ಕೆ ಮಾಡಿಕೊಂಡಿದೆ. ದೇಶದ ನಾಲ್ಕು ತಾಲೂಕುಗಳಲ್ಲಿ ಸಾಗರ ತಾಲೂಕು ಒಂದಾಗಿರುವುದು ಇಲ್ಲಿನ ಜನತೆಗೆ ಹಾಗೂ ನೋ ನೆಟ್ ವರ್ಕ್ ನೋ ವೋಟಿಂಗ್ ಅಭಿಯಾನದ ಸದಸ್ಯರಿಗೂ ಹರ್ಷ ತಂದಿದೆ.
ಸಾಗರ ತಾಲೂಕಿನ ಶೇ 60 ರಷ್ಟು ಭಾಗ ಗುಡ್ಡಗಾಡು ಪ್ರದೇಶಗಳಿಂದ ಕೂಡಿದೆ. ಇದರಿಂದ ಈ ಭಾಗದಲ್ಲಿ ಪೋನ್ ನೆಟ್ ವರ್ಕ್ ಸರಿಯಾಗಿ ಲಭ್ಯವಾಗುತ್ತಿರಲಿಲ್ಲ. ಫೋನ್ ನೆಟ್ವರ್ಕ್ಗಾಗಿ ಜನ ಗುಡ್ಡಗಳನ್ನು ಹತ್ತಿ ಮಾತನಾಡಬೇಕಿತ್ತು. ಈ ಕುರಿತು ಜನ ಸುಮಾರು 20 ಕಿ.ಮೀ ದೂರದ ಪಾದಯಾತ್ರೆ ನಡೆಸಿ, ನಮಗೆ ನೆಟ್ ವರ್ಕ್ ನೀಡದೆ ಹೋದರೆ, ನಿಮಗೆ ವೋಟ್ ಇಲ್ಲ ಎಂಬ 'ನೋ ನೆಟ್ ವರ್ಕ್ ನೋ ವೋಟಿಂಗ್' ಎಂಬ ಅಭಿಯಾನ ನಡೆಸಿದ್ದರು.
ಇದಕ್ಕೆ ಮಣಿದ ಸಾಗರ ಶಾಸಕ ಹಾಲಪ್ಪ ಹರತಾಳು, ಸಂಸದರು ಕೇಂದ್ರದ ದೂರ ಸಂಪರ್ಕ ಇಲಾಖೆಯ ಸಚಿವ ಅಶ್ವಿನ್ ಹಾಗೂ ಹಿಂದಿನ ಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಇದರ ಫಲವಾಗಿ ಈಗ ದೇಶದ ಗ್ರಾಮೀಣ ಭಾಗದಲ್ಲಿ ದೂರ ಸಂಪರ್ಕ ನೀಡುವ ಪ್ರಾಯೋಗಿಕವಾದ ಯೋಜನೆಯಲ್ಲಿ ಸಾಗರವನ್ನು ಆಯ್ಕೆ ಮಾಡಿಕೊಂಡಿದೆ.