ಕರ್ನಾಟಕ

karnataka

ETV Bharat / state

ಮೊಸಳೆ ದಾಳಿಗೆ ಎಮ್ಮೆಯ ಕಾಲು ಕಟ್​... ವಿಡಿಯೊ ನೋಡಿದ್ರೆ ಬೆಚ್ಚಿ ಬೀಳ್ತೀರಾ

ಮೊಸಳೆ ದಾಳಿಯಿಂದ ಎಮ್ಮೆ ಕರುವಿನ ಕಾಲು ಕಟ್​ ಆಗಿದೆ. ನೀರು ಕುಡಿಯಲು ನದಿಗೆ ಇಳಿದಿದ್ದಾಗ ಮೊಸಳೆ ದಾಳಿ ನಡೆಸಿದ್ದು, ಎಮ್ಮೆ ಕರು ಕಾಲು ಕಳೆದುಕೊಂಡಿದೆ.

By

Published : May 21, 2019, 8:34 AM IST

Updated : May 21, 2019, 1:00 PM IST

ಮೊಸಳೆ

ರಾಯಚೂರು:ಕೃಷ್ಣ ನದಿಯಲ್ಲಿ ನೀರು ಕುಡಿಯುತ್ತಿದ್ದ ಎಮ್ಮೆ ಕರುವಿನ ಮೇಲೆ ಮೊಸಳೆ ದಾಳಿ ನಡೆಸಿದ ಪರಿಣಾಮ ಕಾಲು ಕಟ್​ ಆಗಿದೆ. ತಾಲೂಕಿನ ದೇವಸೂಗೂರು ಗ್ರಾಮದ ಬಳಿಯ ಕೃಷ್ಣ ನದಿಗೆ ಕರು ನೀರು ಕುಡಿಯಲು ತೆರಳಿತ್ತು.

ಮೊಸಳೆ ದಾಳಿ

ಸೋಮವಾರ ಮಧ್ಯಾಹ್ನ ಕೃಷ್ಣ ನದಿಯಲ್ಲಿ ಎಮ್ಮೆ ಕರು ನೀರು ಕುಡಿಯಲು‌ ಹೋದಾಗ ಮೊಸಳೆ ದಾಳಿ ನಡೆಸಿದೆ. ಮೊಸಳೆ ದಾಳಿಯಿಂದ ಕಾಲು ಕಳೆದುಕೊಂಡ ಎಮ್ಮೆ ಕರು ಕುಂಟುತ್ತಾ ನದಿ ದಡಕ್ಕೆ ಬಂದು ಸೇರಿ ವಿಲವಿಲನೆ ಒದ್ದಾಡಿದ ದೃಶ್ಯ ಮನಕಲಕುವಂತಿತ್ತು.

ಇನ್ನ ಕೃಷ್ಣ ನದಿಯಲ್ಲಿ ಮೊಸಳೆಗಳಿದ್ದು, ಮಳೆ ಬಾರದೆ ಬತ್ತಿ ಹೋಗುತ್ತಿದೆ. ಹೀಗಾಗಿ ಮೊಸಳೆಗಳಿಗೆ ಆಹಾರವಿಲ್ಲದೆ ಪರದಾಡುತ್ತಿದ್ದು, ಅಹಾರ‌ ಹುಡುಕಿಕೊಂಡು ದಡಕ್ಕೆ ಬಂದು, ಜಾನುವಾರುಗಳ ಮೇಲೆ ದಾಳಿ ಮಾಡುತ್ತಿವೆ ಅಂತಾರೆ ಸ್ಥಳೀಯರು.

Last Updated : May 21, 2019, 1:00 PM IST

For All Latest Updates

ABOUT THE AUTHOR

...view details