ಕರ್ನಾಟಕ

karnataka

ETV Bharat / state

ರಾಯಚೂರಿನ ಹಮ್‌ದರ್ದ್ ಶಾಲೆಗೆ ಶತಮಾನೋತ್ಸವ ಸಂಭ್ರಮ

ರಾಯಚೂರು ನಗರದ ಹಮ್‌ದರ್ದ್ ಶಾಲೆ ಯಶಸ್ವಿಯಾಗಿ 100 ವರ್ಷ ಪೂರೈಸಿದೆ. ಈ ಹಿನ್ನೆಲೆ ಜೂ.12ರಂದು ಶತಮಾನವೋತ್ಸವ ಸಂಭ್ರಮ ಆಚರಿಸಲಾಗುತ್ತಿದೆ.

By

Published : Jun 4, 2019, 3:17 AM IST

ಹಮ್‌ದರ್ದ್ ಶಾಲೆಗೆ ಶತಮಾನದ ಸಂಭ್ರಮ


ರಾಯಚೂರು: ನಗರದ ಹಮ್‌ದರ್ದ್ ಶಾಲಾ ಶತಮಾನೋತ್ಸವ ವರ್ಷಾಚರಣೆಯನ್ನ ಆಚರಿಸಲಾಗುವುದು ಎಂದು ತಾರಾನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಾರಸಮಲ್ ಸುಖಾಣಿ ಹೇಳಿದ್ದಾರೆ.

ಹಮ್‌ದರ್ದ್ ಶಾಲೆಗೆ ಶತಮಾನದ ಸಂಭ್ರಮ


ನಗರದ ಎಆರ್‌ಪಿಎಸ್ ವುಮೇನ್ಸ್ ಕಾಲೇಜಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಂಗಳೂರು ಮೂಲದವರಾದ ಪಂಡಿತ ತಾರಾನಾಥ್ 1920ರ ಯುಗಾದಿ ಹಬ್ಬದ ದಿನದಂದು ಶಾಲೆ ಪ್ರಾರಂಭಿಸಿದ್ರು. ಈ ಭಾಗದ ಎಲ್ಲಾ‌ ವರ್ಗದ ಜನರು ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ಈ ಶಾಲೆ ಸ್ಥಾಪಿಸಲಾಗಿತ್ತು.ಈ ಶಾಲೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ವಿದ್ಯಾಭ್ಯಾ ಮಾಡಿದ್ದಾರೆ. ಇಂದಿಗೂ ಇಲ್ಲಿ ಬಡ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದಂತಹ ವಿದ್ಯಾರ್ಥಿಗಳು ಹಲವು ಉನ್ನತ ಹುದ್ದೆಗಳನ್ನ ನಿಭಾಯಿಸಿದ್ದಾರೆ. ಜತೆಗೆ ಕೆಲವರು ವಿದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಗ್ಗಳಿಕೆಗೆ ಇದೆ. ಶಾಲೆ ಹೊಂದಿದ್ದ ಶಾಲೆ ಯಶಸ್ವಿಯಾಗಿ 100 ವರ್ಷ ಪೂರೈಸುವ ಮೂಲಕ 2019 ಜೂ.12 ರಂದು ಶತಮಾನವೋತ್ಸವ ವರ್ಷಾಚರಣೆ ಆಚರಿಸಲಾಗುತ್ತದೆ. ಕಾರ್ಯಕ್ರಮಕ್ಕೆ ವಿಜಯಪುರ ಶ್ರೀರಾಮಕೃಷ್ಣ ಸ್ವಾಮಿವಿವೇಕಾನಂದ ಆಶ್ರಮದ ನಿರ್ಭಯಾನಂದ ಸ್ವಾಮೀಜಿ, ಕೊಪ್ಪಳ ಗವಿಮಠದ ಪೀಠಾಧಿಪತಿ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ, ಶ್ರೀರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು, ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಶತಮಾನೋತ್ಸವ ಹಿನ್ನೆಲೆಯಲ್ಲಿ ಜೂ.12ರಂದು ಬೆಳಿಗ್ಗೆ ಸಾಕ್ಷರತೆಗಾಗಿ ಓಟ ಎಂಬ ಘೋಷ ವ್ಯಾಕ್ಯದೊಂದಿಗೆ ಮಹಿಳೆಯರ ಮತ್ತು ಪುರುಷರು ಮ್ಯಾರಥಾನ್ ಓಟ ಆಯೋಜಿಸಲಾಗಿದ್ದು, ಇದರಲ್ಲಿ ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಮ್ಯಾರಥಾನ್ ಓಟದಲ್ಲಿ ಪುರುಷರ ವಿಭಾಗದಲ್ಲಿ 6ಕಿ.ಮೀ. ಮೊದಲ ಬಹುಮನವಾಗಿ 25 ಸಾವಿರ ರೂ., ದ್ವಿತೀಯ ಬಹುಮಾನ 15 ಸಾವಿರ ರೂ. ತೃತೀಯ ಬಹುಮಾನ 10 ಸಾವಿರ ರೂ. ನಗದು ಹಣ ಮತ್ತು ಟ್ರೋಫಿಯನ್ನ ನೀಡಲಾಗುವುದು. ಮಹಿಳೆಯರ ವಿಭಾಗದಲ್ಲಿ 3ಕಿ.ಮೀ ಓಟದಲ್ಲಿ 1ನೇ ಬಹುಮಾನ 15 ಸಾವಿರ ರೂ., ದ್ವಿತೀಯ ಬಹುಮಾನ 10 ಸಾವಿರ ರೂ., ತೃತೀಯ ಬಹುಮಾನ 5 ಸಾವಿರ ರೂ. ನಗದು ಹಣ ಮತ್ತು ಟ್ರೋಫಿ ನೀಡಲಾಗುವುದು. ಜೊತೆಗೆ ಮ್ಯಾರಥಾನ್​ನಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ಪ್ರಮಾಣ ಪತ್ರವನ್ನ ವಿತರಿಸಲಾಗುವುದು ಎಂದು ಸುಖಾಣಿ ಮಾಹಿತಿ ನೀಡಿದರು.

For All Latest Updates

ABOUT THE AUTHOR

...view details