ಕರ್ನಾಟಕ

karnataka

By

Published : Jun 10, 2019, 8:33 PM IST

ETV Bharat / state

ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಅಗ್ರಹಿಸಿ ಉಪವಾಸ ಸತ್ಯಗ್ರಹ

ರಾಯಚೂರು ನಗರದ ಹೊರವಲಯದ ವೈಟಿಪಿಎಸ್​ನ 380 ಕಾರ್ಮಿಕರ ಮರು ನೇಮಕಕ್ಕೆ ಅಗ್ರಹಿಸಿ ಇಂದಿನಿಂದ ಟಿಯುಸಿಐ ಸಂಯೋಜಿತ ಯರಮರಸ್ ಥರ್ಮಲ್ ಪವರ್ ಸ್ಟೇಷನ್ ಕಾರ್ಮಿಕರ ಸಂಘದಿಂದ ಉಪವಾಸ ಸತ್ಯಗ್ರಹ ಆರಂಭಿಸಲಾಗಿದೆ.

ಕಾರ್ಮಿಕರ ಬೇಡಿಕೆ ಅಗ್ರಹಿಸಿ ಉಪವಾಸ ಸತ್ಯಗ್ರಹ

ರಾಯಚೂರು: ನಗರದ ಹೊರವಲಯದ ವೈಟಿಪಿಎಸ್​​ನ 380 ಕಾರ್ಮಿಕರ ಮರು ನೇಮಕಕ್ಕೆ ಅಗ್ರಹಿಸಿ ಇಂದಿನಿಂದ ಟಿಯುಸಿಐ ಸಂಯೋಜಿತ ಯರಮರಸ್ ಥರ್ಮಲ್ ಪವರ್ ಸ್ಟೇಷನ್ ಕಾರ್ಮಿಕರ ಸಂಘದಿಂದ ಉಪವಾಸ ಸತ್ಯಗ್ರಹ ಆರಂಭಿಸಲಾಗಿದೆ.

ಕಳೆದ 7 ದಿನಗಳಿಂದ ಧರಣಿ ನಡೆಸಿದರೂ ಸ್ಪಂದನೆ ದೊರೆಯದ ಕಾರಣ ಸರದಿಯಂತೆ 24 ತಾಸು ಉಪವಾಸ ಅರಂಬಿಸಿದ್ದಾರೆ. ಇದರ ಪ್ರಕಾರ ಇಂದು ಅಮರೇಶ, ದಯಾನಂದ, ಬಾಲಪ್ಪ, ಲಕ್ಷ್ಮಣ ಸೇರಿದಂತೆ ಇತರೆ 50 ಕಾರ್ಮಿಕರು ಉಪವಾಸ ಸತ್ಯಗ್ರಹ ನಡೆಸಿದರು.

ವೈಟಿಪಿಎಸ್​​ನಲ್ಲಿ ಕಳೆದ 2-3 ವರ್ಷಗಳಿಂದ ಸತತವಾಗಿ ದುಡಿಯುತಿದ್ದರೂ ಯಾವುದೇ ಮುನ್ಸೂಚನೆ ನೀಡದಿರುವುದು ಖಂಡನಾರ್ಹ. ನೂತನ ಪವರ್ ಮೆಕ್ ಕಂಪನಿ ಹಳೆಯ ಕಾರ್ಮಿಕನ್ನು ವಂಚಿತಗೊಳಿಸುತ್ತಿದ್ದು, ಕಾರ್ಮಿಕರ ಜೀವನ ಸಂಕಷ್ಟದಲ್ಲಿದೆ. ಆದ್ದರಿಂದ ಇಂತಹ ಕಂಪನಿ ನಮಗೆ ಬೇಡ. ಸರಿಯಾದ ವೇತನ ಪಾವತಿ ಹಾಗೂ ಉದ್ಯೋಗ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.

ABOUT THE AUTHOR

...view details