ಕರ್ನಾಟಕ

karnataka

ETV Bharat / state

ಫೇಸ್ ಬುಕ್ ನಲ್ಲಿ ಮಹನೀಯರ ಫೋಟೋ ದುರ್ಬಳಕೆ; ಆರೋಪಿ ಅಂದರ್

ರಾಯಚೂರು ಜಿಲ್ಲೆಯ ಲಿಂಗಸೂಗೂರಿನ ಯುವಕನೋರ್ವ ತನ್ನ ಫೇಸ್ ಬುಕ್ ಅಕೌಂಟ್ ನಲ್ಲಿ ಕೆಲ ಐತಿಹಾಸಿಕ ನಾಯಕರ ಪೋಟೋ ಬಳಕೆ ಮಾಡಿ ಅವಮಾನವೆಸಗಿದ್ದು, ಆರೋಪಿಯನ್ನ ಈಗಾಗಲೇ ಪೊಲೀಸರು ಬಂಧಿಸಿದ್ದಾರೆಂದು ಬಳ್ಳಾರಿ ವಲಯದ ಐಜಿಪಿ ನಂಜುಡಸ್ವಾಮಿ ಹೇಳಿದ್ದಾರೆ.

By

Published : Aug 26, 2019, 10:14 PM IST

ಐಜಿಪಿ ನಂಜುಡಸ್ವಾಮಿ

ರಾಯಚೂರು; ಲಿಂಗಸೂಗೂರು ಯುವಕನೋರ್ವ ತನ್ನ ಫೇಸ್ ಬುಕ್ ಅಕೌಂಟ್ ನಲ್ಲಿ ಕೆಲ ಐತಿಹಾಸಿಕ ನಾಯಕರ ಪೋಟೋ ಬಳಕೆ ಮಾಡಿ ಅವಮಾನವೆಸಗಿದ್ದು, ಆರೋಪಿಯನ್ನ ಈಗಾಗಲೇ ಪೊಲೀಸರು ಬಂಧಿಸಿದ್ದಾರೆಂದು ಬಳ್ಳಾರಿ ವಲಯದ ಐಜಿಪಿ ನಂಜುಡಸ್ವಾಮಿ ಹೇಳಿದ್ದಾರೆ.

ಐಜಿಪಿ ನಂಜುಡಸ್ವಾಮಿ

ಜಿಲ್ಲೆಯ ಲಿಂಗಸೂಗೂರು ಪಟ್ಟಣಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಮುಂಬರುವ ದಿನಗಳಲ್ಲಿ ಇಂತಹ ಘಟನೆ ನಡೆಯದಂತೆ ನಿಗಾವಹಿಸುತ್ತೇವೆ ಎಂದು ಹೇಳಿದ್ದಾರೆ.

ಇನ್ನು ಮಹಾನಿಯರನ್ನ ಅಪಮಾನಗೊಳಿಸಿದ ಕಿಡಿಗೇಡಿಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದು. ಇದರಿಂದಾಗಿ ಪೊಲೀಸ್ ಸಿಬ್ಬಂದಿ ಸೇರಿದಂತೆ, ಕೆಲ ನಾಗರಿಕರು ಗಾಯಗೊಂಡಿದ್ದಾರೆ. ಅಲ್ಲದೇ ಪೊಲೀಸ್ ಇಲಾಖೆ ವಾಹನ ಜಖಂ ಗೊಂಡಿದ್ದು, ಇದರಿಂದಾಗಿ ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು. ಹೀಗಾಗಿ ಪಟ್ಟಣದಲ್ಲಿ ಆ.27ವರೆಗೆ 144 ಕಲಂ ನಿಷೇಧಾಜ್ಞೆ ಹಾಕಲಾಗಿದೆ.

ABOUT THE AUTHOR

...view details