ಕರ್ನಾಟಕ

karnataka

ಪತಿ ಅಗಲಿಕೆಯಿಂದ ಮನನೊಂದ ನವವಿವಾಹಿತೆ ನೇಣಿಗೆ ಶರಣು..

By

Published : Oct 4, 2021, 6:31 PM IST

ಮನನೊಂದಿದ್ದ ಹೀನಾ ಕೌಸರ್​ಗೆ ಕೆಲ ಹಿರಿಯರು ಆತ್ಮಸ್ಥೈರ್ಯ ತುಂಬಿದ್ದರು. ಹೀಗಿದ್ದೂ ಗೃಹಿಣಿ ನೇಣಿಗೆ ಶರಣಾಗಿದ್ದಾರೆ. ಮೃಟಗಳ್ಳಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ..

woman-committed-suicide-in-mysore
ನವವಿವಾಹಿತೆ ನೇಣಿಗೆ ಶರಣು

ಮೈಸೂರು :ಪತಿ ಹೃದಯಾಘಾತದಿಂದ ಮೃತಪಟ್ಟ ಹಿನ್ನೆಲೆ ಮನನೊಂದ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನ ಬಿ‌‌ಎಂಶ್ರೀನಗರದಲ್ಲಿ ನಡೆದಿದೆ‌.

ಹೀನಾ ಕೌಸರ್(27) ಮೃತ ದುರ್ದೈವಿ. 3 ತಿಂಗಳ ಹಿಂದೆ ನರಸಿಂಹ ಎಂಬಾತನನ್ನ ಹೀನಾಕೌಸರ್ ಪ್ರೀತಿಸಿ ಅಂತರ್ಜಾತಿ ವಿವಾಹವಾಗಿ ಬಿಎಂಶ್ರೀನಗರದಲ್ಲಿ ವಾಸವಿದ್ದರು. ಎರಡು ದಿನಗಳ ಹಿಂದೆ ಪತಿ ನರಸಿಂಹ ಹೃದಯಾಘಾತದಿಂದ ನಿಧನರಾಗಿದ್ದರು.

ಇದರಿಂದ ಮನನೊಂದಿದ್ದ ಹೀನಾ ಕೌಸರ್​ಗೆ ಕೆಲ ಹಿರಿಯರು ಆತ್ಮಸ್ಥೈರ್ಯ ತುಂಬಿದ್ದರು. ಹೀಗಿದ್ದೂ ಗೃಹಿಣಿ ನೇಣಿಗೆ ಶರಣಾಗಿದ್ದಾರೆ. ಮೃಟಗಳ್ಳಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ABOUT THE AUTHOR

...view details