ಕರ್ನಾಟಕ

karnataka

By

Published : Oct 7, 2022, 10:07 PM IST

Updated : Oct 7, 2022, 10:15 PM IST

ETV Bharat / state

ಟಿಪ್ಪು, ತಾಳಗುಪ್ಪ ಎಕ್ಸ್​ಪ್ರೆಸ್ ರೈಲುಗಳ ಹೆಸರು ಬದಲಾವಣೆ: ಶುಕ್ರವಾರದ ಶುಭಸುದ್ದಿ ಎಂದ ಸಂಸದ ಪ್ರತಾಪ್​ ಸಿಂಹ

ಟಿಪ್ಪು ಎಕ್ಸ್​​​ಪ್ರೆಸ್​​​ ರೈಲಿನ ಹೆಸರನ್ನು ಒಡೆಯರ್​ ಎಕ್ಸ್​​​ಪ್ರೆಸ್​ ಎಂದು ಬದಲಾಯಿಸಿ ರೈಲ್ವೆ ಇಲಾಖೆ ಆದೇಶ ನೀಡಿದೆ.

Tippu express renamed as wodeyar express
Tippu express renamed as wodeyar express

ಮೈಸೂರು: ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ಟಿಪ್ಪು ಎಕ್ಸ್​​​ಪ್ರೆಸ್​​​ ರೈಲಿನ ಹೆಸರನ್ನು 'ಒಡೆಯರ್​ ಎಕ್ಸ್​​​ಪ್ರೆಸ್​' ಎಂದು ಬದಲಾಯಿಸಲಾಗಿದೆ ಎಂದು ರೈಲ್ವೆ ಇಲಾಖೆ ಶುಕ್ರವಾರ ತಿಳಿಸಿದೆ. ಹಾಗೆಯೇ ತಾಳಗುಪ್ಪ-ಮೈಸೂರು ನಡುವೆ ಸಂಚರಿಸುವ ತಾಳಗುಪ್ಪ ಎಕ್ಸ್​ಪ್ರೆಸ್ ರೈಲಿನ ಹೆಸರನ್ನು 'ಕುವೆಂಪು ಎಕ್ಸ್​ಪ್ರೆಸ್'​ ಎಂದು ಮರು ನಾಮಕರಣ ಮಾಡಲಾಗಿದೆ.

ಈ ಬಗ್ಗೆ ಟ್ವಿಟ್ ಮಾಡಿರುವ ಮೈಸೂರು-ಕೊಡಗು ಸಂಸದ ಪ್ರತಾಪ್​ ಸಿಂಹ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ‌ ವೈಷ್ಣವ್‌ ಮತ್ತು ಪ್ರಹ್ಲಾದ್ ಜೋಶಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಇನ್ನು ಮುಂದೆ ಟಿಪ್ಪು ಎಕ್ಸ್​​​ಪ್ರೆಸ್ ಬದಲು 'ಒಡೆಯರ್ ಎಕ್ಸ್​​​ಪ್ರೆಸ್' ನಿಮಗೆ ಸೇವೆ ನೀಡಲಿದೆ!!. ಮೈಸೂರು-ತಾಳಗುಪ್ಪ ರೈಲು 'ಕುವೆಂಪು ಎಕ್ಸ್​ಪ್ರೆಸ್' ಆಗಲಿದೆ ಎಂದು ತಿಳಿಸಿದ್ದಾರೆ.

ಸಂಸದ ಪ್ರತಾಪ್​ ಸಿಂಹ ಅವರಿಂದ ಮನವಿ ಸಲ್ಲಿಕೆ

ಇತ್ತೀಚೆಗೆ ಟಿಪ್ಪು ಎಕ್ಸ್‌ಪ್ರೆಸ್‌ ರೈಲಿನ ಹೆಸರನ್ನು ಬದಲಾಯಿಸಬೇಕೆಂದು ದೆಹಲಿಯಲ್ಲಿ ರೈಲ್ವೆ ಸಚಿವ ಅಶ್ವಿನಿ‌ ವೈಷ್ಣವ್‌ಗೆ ಪ್ರತಾಪ್​ ಸಿಂಹ ಲಿಖಿತ ಮನವಿ ಸಲ್ಲಿಸಿದ್ದರು.

ಇದನ್ನೂ ಓದಿ: ನಮಗೆ ಅಖಂಡ ಕಾಶ್ಮೀರ ಬೇಕು.. ಪಿಒಕೆಯಲ್ಲಿ ವಾಸಿಸುವ ಜನರು ಭಾರತಕ್ಕೆ ಸೇರಲು ಬಯಸುತ್ತಾರೆ: ರಾಮದಾಸ್ ಅಠಾವಳೆ

Last Updated : Oct 7, 2022, 10:15 PM IST

ABOUT THE AUTHOR

...view details