ಕರ್ನಾಟಕ

karnataka

ಟೆಂಪೋ ಟ್ರಾವೆಲ್​ ಮಾಲೀಕನ ಬರ್ಬರ ಹತ್ಯೆ

ಟೆಂಪೋ ಟ್ರಾವೆಲ್​​​ವೊಂದರ ಮಾಲೀಕರನ್ನು ಬರ್ಬರವಾಗಿ ಹತ್ಯೆ ಮಾಡಿ ಹೆಣ ಬಿಸಾಡಿ ಹೋಗಿರುವ ಘಟನೆ ಮೈಸೂರಿನ ಸಾಲಿಗ್ರಾಮ ಬಳಿಯ ಚುಂಚನಕಟ್ಟೆ ರಸ್ತೆಯಲ್ಲಿ ನಡೆದಿದೆ.

By

Published : Jun 23, 2020, 2:42 PM IST

Published : Jun 23, 2020, 2:42 PM IST

murder
ಬರ್ಬರ ಹತ್ಯೆ

ಮೈಸೂರು:ಟೆಂಪೋ ಟ್ರಾವೆಲ್ ಮಾಲೀಕನನ್ನು ಬರ್ಬರವಾಗಿ ಕೊಲೆ ಮಾಡಿ ಬಿಸಾಕಿ ಹೋಗಿರುವ ಘಟನೆ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮ ಬಳಿಯ ಚುಂಚನಕಟ್ಟೆ ರಸ್ತೆಯಲ್ಲಿ ನಡೆದಿದೆ.

ಆನಂದ್ (35) ಹತ್ಯೆಗೊಳಗಾದ ವ್ಯಕ್ತಿ. ಈತ ಸಾಲಿಗ್ರಾಮದ ನಿವಾಸಿಯಾಗಿದ್ದು, ಟೆಂಪೋ ಟ್ರಾವೆಲ್ ಮಾಲೀಕನಾಗಿದ್ದ. ಕಳೆದ ರಾತ್ರಿ ಚುಂಚನಕಟ್ಟೆ ರಸ್ತೆಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಶ್ವಾನದಳ ಹಾಗೂ ಕೆ.ಆರ್.ನಗರದ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ABOUT THE AUTHOR

...view details